Sunday, November 28, 2010

ಕಳ್ಳರ ಸಂತೆ ಅದರಲ್ಲಿ ಕುಮಾರಸ್ವಾಮಿಯದ್ದು ಒಂದು ಅಂಗಡಿ ಇದೆ

ಛೀ... ಥೂ...


        ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕ್ಕಿಂತ ದೊಡ್ಡ ಉದಾಹರಣೆ ಭಾರತದಲ್ಲಿ ಇನ್ನಲ್ಳೂ ಸಿಗಲಿಕ್ಕಿಲ್ಲ. ದುರ್ಬೀನು ಹಾಕಿ ಹುಡುಕಿದರೂ ಪ್ರಾಮಾಣಿಕರು ಸಿಗುವುದು ಅಪರೂಪವಾಗಿಬಿಟ್ಟದೆ. ಪ್ರಾಮಾಣಿಕರಿದ್ದರೂ ಈ ರಾಜಕೀಯ ನೋಡಿ ಸಪ್ಪಗಾಗಿ ಬಿಟ್ಟಿದ್ದಾರೆ. ಯಡಿಯೂರಪ್ಪನವರನ್ನು ಇಲ್ಲಿವರೆಗೇ ಕರ್ನಾಟಕದ ಜನತೆ ಬಹಳ ದೊಡ್ಡ ಮನುಷ್ಯ, ಹೋರಾಟಗಾರ ಹೀಗೆ ಇನ್ನೂ ಏನೇನೊ ತಿಳಿದುಕೊಂಡಿದ್ದರು. ಕಾರಣ ಅವರು ಬೆಳೆದು ಬಂದ ದಾರಿ.

  ಯಡಿಯೂರಪ್ಪ ಒಬ್ಬ ಮಾತ್ರ ಕಳ್ಳನಾಗಲಿಲ್ಲ ಬೆನ್ನಿಗಿದ್ದ ಸಂಘಟನೆಗೂ ಕೆಟ್ಟ ಹೆಸರು ತಂದಿಟ್ಟು ಇಂದು ಎಲ್ಲೂ ಸಂಘದ ಕಾರ್ಯಕರ್ತರು ಮಾತನಾಡದಂತಹ ಸ್ಥಿತಿಗೆ ತಂದಿಟ್ಟಿದ್ದಾರೆ. ಅಷ್ಟಕ್ಕೂ ಯಡಿಯೂರಪ್ಪ ಮಾಡಿದ್ದಕ್ಕೂ ಸಂಘಕ್ಕೂ ಸಂಬಂಧ ಏನು ಎಂದು ಪ್ರಶ್ನಿಸಬಹುದು. ಆದರೆ ನಿಮ್ಮ ಬಿಜೆಪಿ ಈ ಹಂತಕ್ಕೆ ಬರಲು ಕಾರಣ ಸಂಘದ ಕಾರ್ಯಕರ್ತರು ಹಳ್ಳಿಗೆ ಹೋಗಿ ದೇಶಭಕ್ತರ ಕಥೆಗಳನ್ನು ಹೇಳಿ ಜನರಲ್ಲಿ ರಾಷ್ಟ್ರೀಯ ವಿಚಾರಧಾರೆಗಳನ್ನು ತುಂಬಿಸಿ ಅವರನ್ನು ದೇಶಕ್ಕಾಗಿ ಬದುಕುವಂತೆ ಮಾಡುತ್ತಿರುವಾಗ ನಿಮ್ಮ ಬಿಜೆಪಿ ನಾವೇ ದೇಶ ಕಾಯುವವರು ಎಂದು ಪೋಸು ಕೊಟ್ಟುಕೊಂಡು ಸಂಘದವರು ನಿರ್ಮಿಸಿದ್ದ ವಾತವರಣವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ.

  ರಾಜಕೀಯದಲ್ಲಿ ಇರುವವರೆಲ್ಲರೂ ಕಳ್ಳರೇ ಎಂದು ಈಗ ಯಾರು ಬೇಕಾದರೂ ಘಂಟಾಘೋಷವಾಗಿ ಸಾರಬಹುದು. ಕಾರಣ ಬಿಜೆಪಿಯವರ ಭಯವಿಲ್ಲ. ಕಳ್ಳರ ಸಂತತಿಯೇ ಬಿಜೆಪಿ ಆಗಿದೆ. ಆಪರೇಷನ್ ಕಮಲದಿಂದ ಹಿಡಿದು ಈ ವರೆಗೆ ರಾಜ್ಯಕ್ಕೆ ಅನೇಕ ಹೊಸತನಗಳನ್ನು ತಂದ ಕೀರ್ತಿ ಮತ್ತು ಕಳಂಕ ಬಿಜೆಪಿಗೆ ಸೇರುತ್ತದೆ. ಕಾಂಗ್ರೇಸ್ ಹಾಗೂ ಜೆಡಿಎಸ್ ಅಥವಾ ಇನ್ಯಾವುದೇ ಪಕ್ಷಗಳು ದೇಶವನ್ನು ಇಷ್ಟು ವರ್ಷ ಆಳಿವೆ. ದೇಶವನ್ನು ಲೂಟಿ ಮಾಡಿವೆ ಎಂದು ಹೇಳಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಮುಕ್ಕಾಲು ಪಾಲು ಬಿಜೆಪಿಯವರು ಮಾಡಿದ್ದೇನು. ಇವತ್ತು ರಾಜ್ಯದ ಜನತೆ ನಿಮಗೆ ಮೇಲೆ ಮೊದಲಿಗೆ ಹೇಳಿದ ಹಾಗೇ ಛೀ.. ಥೂ ಎನ್ನುತ್ತಿದ್ದಾರೆ.

  ಕಳೆದ ಎರಡುವರೆ ವರ್ಷ ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳೂ ಈಗ ನೀರಿನಲ್ಲಿ ಹೋಮ ಮಾಡಿದಂತಾಗಿವೆ. ಜನ ನಿಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಮಾತು ಮಾತಿಗೂ ಭಾರತ ಮಾತೆ, ದೇಶಭಕ್ತರು ಅಂಥ ಹೇಳಿಕೊಂಡು ಇಂದು ದೇಶವನ್ನೇ ಮಾರುವ ಸ್ಥಿತಿಗೆ ಬಂದು ನಿಂತಿದ್ದಾರೆ ಬಿಜೆಪಿಯವರು. ಕಾರಣ ದೇಶಭಕ್ತರು ಬಿಜೆಪಿಯವರು ಮಾತ್ರ ಆದ್ದರಿಂದ ಆ ದೇಶವನ್ನು ಅವರೇ ಮಾರಿಕೊಳ್ಳಬಹುದು  ಎಂಬ ಭ್ರಮೆ.

  ನಾಡಿನ ಮುಖ್ಯಮಂತ್ರಿಗಳಿಂದ ಹಿಡಿದು ಒಬ್ಬ ಜಿಲ್ಲಾಧ್ಯಕ್ಷನವರೆಗೆ ಎಲ್ಲರೂ ದೋಚುತ್ತಿದ್ದಾರೆ. ನಿನ್ನೆ ಮೊನ್ನೆ ಏನು ಇರಲಿಲ್ಲ. ಅವನು ಸಿಕ್ಕಬಟ್ಟೆ ಪ್ರಾಮಾಣಿಕ. ಆದರೆ ಈಗ ಐಷಾರಾಮಿ ಕಾರಿದೆ ಹಿಂದೆ ಮುಂದೆ ಜನರಿದ್ದಾರೆ. ಏನಿದು ಹೇಗೆ ಸಾದ್ಯ. ನಿಮ್ಮ ಬಗ್ಗೆ ಜನ ಏನು ತಿಳಿದುಕೊಳ್ಳಬಹುದು ಯೋಚಿಸಿದ್ದೀರಾ. ನೀವು ಮಾತ್ರ ಇಷ್ಟೆಲ್ಲಾ ಮಾಡಲು ರಾಜ್ಯದ ಜನರೇನು ನಿಮಗೆ ಈ ರಾಜ್ಯವನ್ನು ಮಾರಿದ್ದಾರೆ ಎಂದುಕೊಂಡಿದ್ದೀರಾ.

  ಭ್ರಷ್ಟಾಚಾರದ ಕರ್ಮಕಾಂಡದಲ್ಲಿ ಮುಳುಗಿದ್ದ ಯಡಿಯೂರಪ್ಪನವರ ಬಗ್ಗೆ ಆರೋಪಗಳು ಕೇಳಿ ಬಂದ ತಕ್ಷಣ ರಾಜಿನಾಮೆ ಕೊಟ್ಟು ಬಂದಿದ್ದರೆ ಯಡಿಯೂರಪ್ಪ ಗ್ರೇಟ್ ಆಗಿ ಬಿಡುತ್ತಿದ್ದರು. ಆದರೆ ಇಲ್ಲಿವರೆಗೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ  ಸಿ.ಎಂ. ಕುರ್ಚಿಯನ್ನು ಬಿಡದಂತೆ ಹಿಡಿದುಕೊಂಡಿರುವ ಅಥವಾ ಕಾಲು ಹಿಡಿದು ಎಳೆದರೂ ಬಿಡದಂತೆ ಅಡ್ಡ ಬಿದ್ದು ಹಿಡಿದಿರುವ ಕಾರ್ಟೂನ್ ನಿಮ್ಮ ವರ್ತನೆಗಳನ್ನು ನೂರಕ್ಕೆ ನೂರು ಬಿಂಬಿಸುತ್ತಿತ್ತು.

  ಇನ್ನೂ ಏನೇ ಮಾಡದರೂ ಈ ಹಿಂದೆ ಜನರಿಗೋಸ್ಕರವಾಗಿ ಇದ್ದ ಯಡಿಯೂರಪ್ಪ, ರೈತರಿಗಾಗಿ ಇದ್ದ ಯಡಿಯೂರಪ್ಪ, ಅವರಿಗಾಗಿಯೇ ಸೈಕಲ್ ಮೇಲೆ ಇಡೀ ಶಿಖಾರಿಪುರ ತಾಲೂಕನ್ನು ಸುತ್ತಿದ ಯಡಿಯೂರಪ್ಪ ಸತ್ತು ಹೋಗಿದ್ದಾರೆ. ಈಗೇನಿದ್ದರು ಸ್ವಜನ ಪಕ್ಷಪಾತಿ, ಅಧಿಕಾರದ ಅಮಲು ಏರಿರುವ, ಭಗಳ್ಳ ಯಡಿಯೂರಪ್ಪ ಮಾತ್ರ ಮುಖ್ಯಮಂತ್ರಿಯಾಗಿರುವುದು.

 ಕುಮಾರ ಸ್ವಾಮಿ ಬಾರಿ ಸಾಚಾ ಮನುಷ್ಯನೇ

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಏನು ಸಾಚಾ ಅಂತ ನಾನಿಲ್ಲಿ ಇಷ್ಟರವರೆಗೆ ಯಡಿಯೂರಪ್ಪನವರನ್ನು ಬೈಯಲಿಲ್ಲ. ಕಳ್ಳರ ಸಂತೆ ಅದರಲ್ಲಿ ಕುಮಾರಸ್ವಾಮಿಯದ್ದು ಒಂದು ಅಂಗಡಿ ಇದೆ. ಮಾದ್ಯಮಗಳನ್ನೇ ಖರೀಧಿ ಮಾಡಿಕೊಂಡು ಯಡಿಯೂರಪ್ಪನವರ ವಿರುದ್ದ ತಿರುಗಿಬಿದ್ದು ಬಾರಿ ಸಾಧನೆ ಮಾಡಿದಂತೆ ಪ್ರತಿ ದಿನ ಟಿ.ವಿ ಹಾಗೂ ಪತ್ರಿಕೆಗಳಲ್ಲಿ ರಾಜ್ಯದ ಉದ್ದಾರಕ್ಕಾಗಿಯೇ ಅವತಾರವೆತ್ತಿ ಬಂದವರಂತೆ ಪೋಸು ಕೊಡುತ್ತಾ ಮುಖ ಗಂಟಿಕ್ಕಿಕೊಂಡು ಮಾತನಾಡುವುದು ಹೇಸಿಗೆಯಾಗುತ್ತದೆ.

  ಯಾರೋ ಒಬ್ಬ ಪ್ರಾಮಾಣಿಕ ಯಡಿಯೂರಪ್ಪನವರ ಬಗ್ಗೆ ಇಷ್ಟೆಲ್ಲಾ ಆರೋಪಗಳನ್ನು ಮಾಡಿದ್ದರೆ ಅದನ್ನು ಒಪ್ಪಬಹುದು. ಆದರೆ, ತಾನು ಮಾಡಿರುವುದನ್ನೇ ಇನ್ನೊಬ್ಬ ಮಾಡಿದ್ದಾನೆ ಅದನ್ನೇ ನಾನು ಮಾಡಿಯೇ ಇಲ್ಲ ಎನ್ನುವಂತೆ ಮಾತಾಡಿದ ತಕ್ಷಣ ಜನ ನಂಬುತ್ತಾರೆ ಎಂದುಕೊಂಡಿದ್ದಿರಾ..

  ಜನ ಈಗಾಗಲೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಭೂ ಹಗರಣ ಬಹಳ ಹಿಂದಿನಿಂದಲೂ ಆಗಿದೆ. ಆದರೆ ಈ ತನಕ ಯಾಕೆ ಇದು ಇಷ್ಟು ಸುದ್ದಿಯಾಗಲಿಲ್ಲ. ಕುಮಾರಸ್ವಾಮಿಯವರಿಗೆ ಮಾತ್ರ ಈ ವಿಷಯ ಗೊತ್ತಾದದ್ದು ಹೇಗೆ. ಆದರೆ ಜನ ಬುದ್ದಿವಂತರು ಕಳ್ಳರ ದಾರಿ ಕಳ್ಳರಿಗೆ ಮಾತ್ರ ಗೊತ್ತಿರುತ್ತದೆ. ಯಡಿಯೂರಪ್ಪ ಇಲ್ಲಿ ಹೀಗೆ ಮಾಡಿದ್ದಾರೆ ಎಂದು ನೀವು ಮಾಡಿದ್ದಕ್ಕೆ ತಾನೇ ಗೊತ್ತಾಗಿದ್ದು.

  ಒಟ್ಟಾರೆಯಾಗಿ ರಾಜಕೀಯ ಹೊಲಸು ಎಂದು ಈಗ ಅಧಿಕೃತವಾಗಿ ಗೊತ್ತಾಗಿದೆ. ಅದಕ್ಕೆ ಜನರೆಲ್ಲಾ ಸೇರಿ ಛೀ.. ಥೂ ಎನ್ನುತ್ತಿದ್ದಾರೆ. ಅದು ನಿಮ್ಮೆಲ್ಲರ ಮುಖದ ಮೇಲಿದೆ. ಹೊರೆಸಿಕೊಳ್ಳುವ ಪ್ರಯತ್ನವನ್ನಾದರೂ ಮಾಡಿ.


{ಮನವಿ: ಈ ಬರಹದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಭ್ರಮನಿರಸನಗೊಂಡು ಬರೆದ ಬಿಸಿಯಿದೆ. ರಾಜಕಾರಣಿಗಳೆಲ್ಲರೂ ಕೆಟ್ಟವರೆಂಬುದು ನನ್ನ ವಾದವಲ್ಲ. ಹಾಗೇಯೇ ಬಿಜೆಪಿಯಲ್ಲಿ ಅತ್ಯಂತ ಪ್ರಾಮಾಣಿಕರಿದ್ದಾರೆ ಅದು ನನಗೆ ಗೊತ್ತಿದೆ. ಆದರೆ ಇಲ್ಲಿವರೆಗೆ ನಾಯಕರೆನಿಸಿಕೊಂಡವರೇ ಹೀಗೆ ಮಾಡಿದಾಗ ಪ್ರಾಮಾಣಿಕರಿಗೆ ಬೆಲೆ ಕಡಿಮೆಯಾಗುತ್ತದೆ. ಈ ಬರಹದಿಂದ ಪ್ರಾಮಾಣಿಕರಿಗೆ ಯಾವ ತಪ್ಪು ಮಾಡದವರಿಗ ನೋವಾಗುವ ಸಂದರ್ಭ ಬಂದರೆ ಅದಕ್ಕೆ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ.}

5 comments:

  1. ಲೇಖನ ಏನೋ ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದೆ. ಸಂತೋಷ. ಅಕ್ಷರ ತಪ್ಪುಗಳು ಬಹಳಷ್ಟಿವೆ. ಈ ಹಿಂದೆಯೂ ಹೇಳಿದ ನೆನಪು, ದಯವಿಟ್ಟು ಸ್ವಲ್ಪ ಗಮನ ಹರಿಸಿ.
    ಶುಭವಾಗಲಿ

    ReplyDelete
  2. Tippaeswamy.... Really a true fact.... A daring act i must say.... Proud to be a friend of yours.... There are a few spelling mistakes and some punctuation marks are missing.... sorry for the comment. but very nice....

    ReplyDelete
  3. ತಪ್ಪುಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ಈಗ ಸರಿಯಾಗಿದೆಯಾ....

    ReplyDelete
  4. ಸತ್ಯ ಹೇಳಬೇಕೋ ಸುಳ್ಳು ಹೇಳಬೇಕೋ?

    ReplyDelete
  5. Sir U have written nice Articles Keep it up...

    ReplyDelete