Sunday, December 12, 2010

ಬೋರಾಗುತ್ತಿದೆ.....ಮುಂದಕ್ಕೆ ಹೋಗಲು ಸಿದ್ಧನಾಗುತ್ತಿದ್ದೇನೆ

ಇಲ್ಲಿ ಯಾವೂದನ್ನು ಉಳಿಸಿಕೊಳ್ಳಲಿಕ್ಕಾಗುವುದಿಲ್ಲ. ಶಾಶ್ವತವಾಗಿ ಎಂಬುದು ಒತ್ತಟ್ಟಿಗಿರಲಿ ಸರಿಯಾಗಿಯೂ ಉಳಿಸಿಕೊಳ್ಳಲಿಕ್ಕಾಗುವುದಿಲ್ಲ. ಒಂದು ಸಿಕ್ಕಿ ನಿಟ್ಟುಸಿರು ಬಿಡುವಷ್ಟರಲ್ಲಿ ಇನ್ನೊಂದು ಸ್ಪರ್ಧೆ ಆರಂಭವಾಗಿಬಿಟ್ಟಿರುತ್ತದೆ. ಜೀವನ ಒಂದು ನಿರಂತರವಾದ ರೇಸ್. ಓಡಿ ಓಡಿ ಸಾಕಾಗುತ್ತದೆ. ನೆಮ್ಮದಿಯಾಗಿ ಒಂದು ಕಡೆ ಇದ್ದುಬಿಡೋಣವೆಂದರೆ ಮನಸ್ಸೆಂಬುದು ತನಗೆ ಬೇಕಾದಂತೆ ಆಟವಾಡಿಸಿಬಿಡುತ್ತದೆ.


ಬೆಳೆಗ್ಗೆ ಇನ್ನೂ ಯಾವೂದಕ್ಕೂ ತಲೆಯನ್ನೇ ಕೊಡಬಾರದು ಎಂದು ಹೇಳುವ ಮನಸ್ಸು ಸಂಜೆಯ ಹೊತ್ತಿಗೆ ಒಳಗಿನಿಂದಲೇ ಕ್ರಾಂತಿ ಆರಂಭಿಸಿಬಿಡುತ್ತದೆ. ಬೆಳೆಗ್ಗೆಯೋ ಅಥವಾ ಸಂಜೆಯೋ ಒಂದು ನಿರ್ಧಾರವನ್ನು ತೆಗೆದುಕೊಂಡರೆ ಅದು ಮರು ಕ್ಷಣ ಸವಕಲಾಗಿಬಿಡುತ್ತದೆ. ಯಾರೋ ಒಬ್ಬರು ಆದರ್ಶಗಳಿಗಾಗಿ ಸತ್ತರು ನಾನ್ಯಾಕೆ ಹಾಗೇ ಸಾಯಬೇಕು. ಅವರು ಮಾಡಿದಂತೆಯೇ ನಾನ್ಯಾಕೆ ಮಾಡಬೇಕು ಎಂಬ ಸಣ್ಣ ಹಠ.

ಇಂದಿನ ದಿನಗಳಲ್ಲಿ ಆದರ್ಶಗಳೇನಿದ್ದರೂ ಹೇಳುವುದಕ್ಕೂ ಕೇಳುವುದಕ್ಕೂ ಹಾಗೂ ಹೊಗಳಲಿಕ್ಕೂ ಚೆಂದ. ಆಚರಣೆಗಲ್ಲ. ಆದರ್ಶಕ್ಕಾಗಿ ಬದುಕಿದರೆ ಜೀವನ ಪೂರ್ತಿಯಾಗಿ ಹೀಗೆ ಒದ್ದಾಡುತ್ತಿರಬೇಕು. ಆದರೆ ಒಂದೇ ಒಂದು ಸಾರಿಟಡ್ಡದಾರಿ ತುಳಿದುಬಿಟ್ಟರೆ ನಾನು ಜನನಾಯಕನಾಗಿಬಿಡುತ್ತೇನೆ. ಹಾಗೂ ಅವತ್ತು ಅಡ್ಡದಾರಿಯಲ್ಲಿ ಹೋದವರೆ ಸಮಾಜಕ್ಕೆ ಮಾರ್ಗದರ್ಶನ ಮಾಡಲು ನಿಂತಿರುವವರು. ಮಾಡಬಾರದ್ದನ್ನೆಲ್ಲಾ ಮಾಡಿ ಕೊನೆಗೆ ಇನ್ನೊಬ್ಬರಿಗಿ ನ್ಯಾಯ, ಧರ್ಮ ಹೇಳಲು ನಿಂತಿರುತ್ತಾರೆ. ಈ ಸ್ಥಿತಿಗೆ ಬರುವುದಕ್ಕೆ ನೀನು ಮಾಡಿದ ಕೆಲಸ ಹೇಳಪ್ಪ ಎಂದು ಕೇಳುವ ಮನಸ್ಸು ಕೂಡಾ ಬರುವುದಿಲ್ಲ. ಕಾರಣ ಆ ಕ್ಷಣಕ್ಕೆ ನಾನೂ ಕೂಡಾ ಅವನ ಬಳಿ ಒಳ್ಳೆಯವನಾಗಿಬಿಡಬೇಕು. ನಾಲ್ಕು ಜನರ ಎದುರು ಅವನ ಕೈ ನನ್ನ ಹೆಗಲ ಮೇಲಿರಬೇಕು.


ಮರುಕ್ಷಣ ಭ್ರಷ್ಠ ಅಂಥವನ ಕೈ ನನ್ನ ಹೆಗಲ ಮೇಲಿಟ್ಟುಕೊಂಡು ಓಡಾಡಿದರೆ ಆ ಕಳಂಕ ನನ್ನ ತಲೆಗೆಲ್ಲಿ ಅಂಟುವುದೆಂಬ ಭಯ.


ಆದರೆ ಒಂದೇ ಒಂದು ಉದಾಹರಣೆಯನ್ನು ಕೇಳಿದಾಕ್ಷಣ ನಾನು ಯಾಕೆ ಅವರಂತಾಗಬಾರದು. ಇಂಥಹ ಬಾಬು ತುಂಬ ಪ್ರಾಮಾಣಿಕ ಪತ್ರಕರ್ತ ಎಂದು ಯಾರೋ ಒಬ್ಬ ಮೂರನೇ ವ್ಯಕ್ತಿ ಹೇಳಿದಾಗ, ಛೇ ಎಷ್ಟು ಹಣವಿದ್ದರು ಜನರ ಬಾಯಲ್ಲಿ ಕೇವಲವಾಗುವುದಕ್ಕಿಂತ ಹೀಗೆ ನನ್ನ ಕಣ್ಣಿಗೆ ಕಾಣದ ವ್ಯಕ್ತಿಯೊಬ್ಬನಿಂದ ನಾನು ಸಾಚಾ ಎಂದು ಹೇಳಿಕೊಳ್ಲುವುದರಲ್ಲಿ ಎಷ್ಟು ಹಿತವಿದೆ. ಆದರೆ ಸಮಸ್ಯೆ ಎದುರಾದಾಗ ನನ್ನ ಒಳ್ಳೆಯತನ ಸಹಾಯಕ್ಕೆ ಬಾರದಿದ್ದರೆ ಸಾಚಾ ಆಗಿ ಯಾರಿಗೆ ಏನಾಗಬೇಕಿದೆ. ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲಿ ನನಗೇನು
 ಎಂಬ ಭಾವನೆ ಮನಸ್ಸಿನಲ್ಲಿ ಬಂದಾಗ ಮತ್ತೊಮ್ಮೆ ಯೋಚನೆಗಳು ತಲೆಕೆಳಗು.


ಹೀಗೆ ಮನಸ್ಸು ಎಲ್ಲೆಲ್ಲೊ ಅಟ್ಟಾಡಿಸಿಕೊಂಡು ಬರುತ್ತದೆ.

ಬೆಂಗಳೂರಿನಲ್ಲಿರುವ ತನಕ ಬೆಂಗಳೂರು ಬೇಡ. ಅಲ್ಲಿಂದ ಹೊರ ಬಂದು ಇಲ್ಲಿ ಏನು ಇಲ್ಲ ಅದಾಗ ಅದೇ ಚೆನ್ನಾಗಿತ್ತು. ಯಾವಾಗಲೂ ಎಲ್ಲಾ ಕ್ಷಣಗಳು ಎಣಿಕೆಯಂತೆ ಇರುವುದೇ ಇಲ್ಲ. ಅಯೋಮಯ. ಅಲ್ಲಿದ್ದಾಗ ಅವರು ನನ್ನನ್ನು ಶತ್ರು ತರ ನೋಡುತ್ತಾರೆ. ಇಲ್ಲಿಗೆ ಬಂದ ನಂತರ ಅವರು ಅಷ್ಟು ಬೈದದ್ದು ನನ್ನ ಹಿತಕ್ಕಾಗೇ. ಕಾರಣ ಅರಿಂದ ಬೈಸಿಕೊಂಡು ಒಳ್ಳೆಯವಾರಗಿ ಬದುಕುವವರನ್ನು ನೋಡಿದೆ. ದುರ್ಗಾ ಬೋರಾಗುತ್ತಿದೆ. ಅದಕ್ಕೆ ಹೀಗೆ.... ಮುಂದಕ್ಕೆ ಹೋಗುವ ಹಂಬಲ ಸಿದ್ಧನಾಗುತ್ತಿದ್ದೇನೆ...

1 comment:

  1. ಬಹಳ ಸಂತೋಷ. ಆದರೆ ಮನಸು ನಿಮ್ಮನ್ನು control ಮಾಡುವುದಕ್ಕಿಂತ ನೀವು ಮನಸ್ಸನ್ನು control ಮಾಡಿದ್ದರೆ ಇನ್ನಷ್ಟು ಚೆನ್ನಾಗಿರುವುದು. ಇದು "ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ" ಎಂಬಂತಿದೆ.

    ReplyDelete