ಆದರೆ ಆಗಿದ್ದೆ ಬೇರೆ. ಒಂದು ಸಲ ಯೋಚನೆ ಮಾಡಿದರೆ ಇದು ಹೀಗಾಗಿದ್ದೆ ಒಲ್ಳೆಯದಾಯಿತೇನೊ ಅನ್ನಿಸುತ್ತದೆ. ಅದರೆ ಇನ್ನೊಮ್ಮೆ ಯಾವತ್ತಿದ್ದರೂ ನಡೆಯುವುದು ನಡೆಯಲೇ ಬೇಕು ಒಂದು ಸರಿ ಏನಾದರೂ ಒಂದು ಆಗಿಬಿಟ್ಟರೆ ಸಾಕು ಎಂಬ ಹಂಬಲ ಅನೇಕರದ್ದು.

ಕೆಲವು ನಗರಗಳಂತು ಬೂದಿ ಮುಚ್ಚಿದ ಕೆಂಡದಂತಿದ್ದವು. ಈಗಾಗಲೇ ಎರಡು ಕಡೆಗಳಲ್ಲಿ ಗಲಭೆಗೆ ಸಜ್ಜಾದ ಉದಾಹರಣೆಗಳು ಅಲ್ಲಲ್ಲಿ ಗುಸುಗುಸುಗಳಿಂದ ಕೇಳಿ ಬರುತ್ತಿದ್ದವು.
ತೀರ್ಪು ಯಾರ ಕಡೆಗೆ ಬೇಕಾದರೂ ಬರಲಿ ಗಲಾಟೆ ನಡೆಯುವುದು ನಿಶ್ಚಿತ ಎಂದು ಅನೇಕರ ವಾದ. ಇದನ್ನು ಕೇಳಿಸಿಕೊಂಡ ಹಿಂದು ಮುಸ್ಲೀಂ ಮಹಿಳೆಯರು ನಗರಗಳಿಂದ ಹಳ್ಳಿಗಳ ಕಡೆ ವಲಸೆಯನ್ನು ಹೋಗಿದ್ದರು.
ಆದರೆ ಈ ಕೋಟೆಯ ಆಶಯ ತೀರ್ಪು ಬರಲಿ ಅದನ್ನು ಎಲ್ಲರು ಒಪ್ಪಿಕೊಳ್ಳಲಿ ಹಾಗೂ ಭೋಪಾಲ್ ದುರಂತದಂತ ತೀರ್ಪು ಬರದೇ ಸತ್ಯ ನ್ಯಾಯ ಎತ್ತಿ ಹಿಡಿದು ಜನರಿಗೆ ನ್ಯಾಯಾಲಯದ ಮೇಲೆ ವಿಶ್ವಾಸ ಬರುವಂತಹ ತೀರ್ಪು ಬರಲಿ.