Thursday, September 23, 2010

ನ್ಯಾಯಾಲಯದ ಮೇಲೆ ವಿಶ್ವಾಸ ಬರುವಂತಹ ತೀರ್ಪು ಬರಲಿ

ಬಿಸಿ ಬಿಸಿಯಾಗುತ್ತಿರುವಾಗಲೇ ತಣ್ಣಗಾಯಿತು. ಎಲ್ಲೋ ಒಂದು ಕಡೆ ಇದು ಪೂರ್ವ ನಿಯೋಜಿತವೇನೊ ಅನ್ನಿಸುವಷ್ಟರ ಮಟ್ಟಿಗೆ ಇದು ನಡೆದು ಬಿಟ್ಟಿತು. ಆತಂಕದ ಮಡುವಿನಲ್ಲಿ ಕೆಲವರು ಮುಳುಗಿ ಹೋಗಿದ್ದರೆ ಇನ್ನು ಕೆಲವರು ಏನಾಗುತ್ತದೇ ಏನೋ ಎಂಬ ತೀವ್ರ ಕುತೂಹಲದಲದಲ್ಲಿ, ತುದಿಗಾಲಲ್ಲಿ ನಿಂತಿದ್ದರು.
 ಆದರೆ ಆಗಿದ್ದೆ ಬೇರೆ. ಒಂದು ಸಲ ಯೋಚನೆ ಮಾಡಿದರೆ ಇದು ಹೀಗಾಗಿದ್ದೆ ಒಲ್ಳೆಯದಾಯಿತೇನೊ ಅನ್ನಿಸುತ್ತದೆ. ಅದರೆ ಇನ್ನೊಮ್ಮೆ ಯಾವತ್ತಿದ್ದರೂ ನಡೆಯುವುದು ನಡೆಯಲೇ ಬೇಕು ಒಂದು ಸರಿ ಏನಾದರೂ ಒಂದು ಆಗಿಬಿಟ್ಟರೆ ಸಾಕು ಎಂಬ ಹಂಬಲ ಅನೇಕರದ್ದು.
ಅಯೋಧ್ಯೆಯ ರಾಮ ಜನ್ಮಭೂಮಿ ಹಿಂದುಗಳಿಗೆ ಸೇರಿದ್ದು ಆದ್ದರಿಂದ ಅದು ಹಿಂದುಗಳ ಪರವಾಗಿಯೇ ಇರಬೇಕು ಕೋರ್ಟ್ ತೀರ್ಪು ಹಿಂದುಗಳ ಪರವಾಗಿಯೇ ಇದೆ ಎಂಬ ಬಲವಾದ ನಂಬಿಕೆ ಹಿಂದುಗಳದ್ದಾದರೆ ಮುಸಲ್ಮಾನರು ಅಲ್ಲಿ ಬಾಬರ್ ಕಟ್ಟಿದ ಮಸೀದಿಯಿತ್ತು ಆದ್ದರಿಂದ ಅದು ನಮಗೆ ಸೇರಬೇಕು ಎಂದು ಎರಡು ಕಡೆಗಳಲ್ಲಿ ಬೆಟ್ಟಿಂಗ್ ಕೂಡಾ ನಡೆಯುತ್ತಿದ್ವು. ಆದರೆ ಇದೆಲ್ಲದಕ್ಕು ಒಮ್ಮೆ ತಣ್ಣೀರು ಬಿದ್ದಿದ್ದು ತೀರ್ಪು ಮುಂದೆ ಹೋದಾಗ.
ಕೆಲವು ನಗರಗಳಂತು ಬೂದಿ ಮುಚ್ಚಿದ ಕೆಂಡದಂತಿದ್ದವು. ಈಗಾಗಲೇ ಎರಡು ಕಡೆಗಳಲ್ಲಿ ಗಲಭೆಗೆ ಸಜ್ಜಾದ ಉದಾಹರಣೆಗಳು ಅಲ್ಲಲ್ಲಿ ಗುಸುಗುಸುಗಳಿಂದ ಕೇಳಿ ಬರುತ್ತಿದ್ದವು.
ತೀರ್ಪು ಯಾರ ಕಡೆಗೆ ಬೇಕಾದರೂ ಬರಲಿ ಗಲಾಟೆ ನಡೆಯುವುದು ನಿಶ್ಚಿತ ಎಂದು ಅನೇಕರ ವಾದ. ಇದನ್ನು ಕೇಳಿಸಿಕೊಂಡ ಹಿಂದು ಮುಸ್ಲೀಂ ಮಹಿಳೆಯರು ನಗರಗಳಿಂದ ಹಳ್ಳಿಗಳ ಕಡೆ ವಲಸೆಯನ್ನು ಹೋಗಿದ್ದರು.
ಆದರೆ ಈ ಕೋಟೆಯ ಆಶಯ ತೀರ್ಪು ಬರಲಿ ಅದನ್ನು ಎಲ್ಲರು ಒಪ್ಪಿಕೊಳ್ಳಲಿ ಹಾಗೂ ಭೋಪಾಲ್ ದುರಂತದಂತ ತೀರ್ಪು ಬರದೇ ಸತ್ಯ ನ್ಯಾಯ ಎತ್ತಿ ಹಿಡಿದು ಜನರಿಗೆ ನ್ಯಾಯಾಲಯದ ಮೇಲೆ ವಿಶ್ವಾಸ ಬರುವಂತಹ ತೀರ್ಪು ಬರಲಿ.