Sunday, December 19, 2010

ಅಮವಾಸ್ಯೆಯ ದಿನ ಅಮಾಯಕರಿಗೆ ಮದುವೆ ಮಾಡಿಸಿದ್ದು ಸಮರ್ಥನೆಯಾಗಿತ್ತು.

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಇತ್ತೀಚೆಗೆ ಶಿವಮೊಗ್ಗದಲ್ಲಿ ಹೇಳಿದ ಒಂದು ಹೇಳಿಕೆ ಪತ್ರಕರ್ತರು ನಾಯಿಗಳು, ಅವರು ವಸೂಲಿ ವೀರರು ಎಂಬ ಮಾತುಗಳನ್ನು ಅವರಾಡಿದ್ದಾರೆ. ಆದರೆ ಈ ಮಾತುಗಳನ್ನು ಅವರು ಹೇಳುವಾಗ ಯಾವ ಉದ್ದೇಶದಿಂದ ಹೇಳಿದ್ದಾರೆ ಎಂಬುದು ಸ್ಪಸ್ಟವಾದರೆ ಮಾತ್ರ ಅವರ ಮಾತು ಹಾಗೂ ಹೇಳಿಕೆಯ ಹಿನ್ನೆಲೆ ಅರ್ಥವಾಗುತ್ತಿತ್ತು.

ಶರಣರು ಪತ್ರಕರ್ತರನ್ನು ನಾಯಿಗಳು ಎಂದು ಹೇಳಿದಾಕ್ಷಣ ಎಲ್ಲೆಡೆಯಿಂದಲೂ ಅವರನ್ನು ವಿರೋಧಿಸುವ ಕೆಲಸ ಆರಂಬವಾಯಿತು. ಆದರೆ ಯಾರು ಕೂಡಾ ಪಟ್ಟು ಹಿಡಿದು ಯಾರಿಗೆ ಈ ಮಾತನ್ನು ಹೇಳಿದ್ದೀರಿ..? ಯಾವ ಉದ್ದೇಶದಿಂದ ಹೇಳಿದ್ದೀರಿ ಎಂದು ಕೇಳಲಿಲ್ಲ. ಆದರೆ ಎಲ್ಲೋ ಒಂದು ಕಡೆ ಸಣ್ಣ ಸಂದೇಹ ಕಾಡುತ್ತದೆ. ಸ್ವಾಮೀಜಿ ಏನು ಮಾಡಿದರೂ ಅದು ಒಂದು ಕ್ರಾಂತಿಕಾರಿ ಹೆಜ್ಜೆ ಎಂಬಂತೆ ಬಿಂಬಿಸಿದ ಪತ್ರಕರ್ತರು ಇವತ್ತು ಅವರನ್ನೇ ವಿರೋಧಿಸುತ್ತಿದ್ದಾರೆಂದರೆ ಈ ಕ್ರಾಂತಿಕಾರಿ ಹೆಜ್ಜೆಯಿಡಲು, ಎಲ್ಲೆಲ್ಲೂ ಬಸವಣ್ಣನ ಇನ್ನೊಂದು ರೂಪ ಎಂದೆಲ್ಲಾ ಹೇಳಿಸಿಕೊಳ್ಳಲು ಶಿವಮೂರ್ತಿ ಶರಣರು ಎಷ್ಟು ಹಣ ಖರ್ಚು ಮಾಡಿರಬಹುದು...?

ಬಹಳ ಬಹಿರಂಗವಾಗಿ ಉಳಿದಿರುವ ಒಂದು ಸತ್ಯವೆಂದರೆ ಇತ್ತೀಚೆಗೆ ಮಾದ್ಯಮಗಳು ಪುಕ್ಸಟ್ಟೆ ಯಾರನ್ನೂ ಹೀರೋ ಮಾಡುವುದಿಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅವನು ದೇಶದ ದೊಡ್ಡ ಜನನಾಯಕನಾಗಿಬಿಡಬಹುದು ಅಂಥಹ ಒಂದು ಶಕ್ತಿ ಇಂದು ಮಾದ್ಯಮಗಳಿಗಿದೆ. ಅದು ಜನರೇ ಪಾಲಿಸಿದ್ದು. ಮಾದ್ಯಮಗಳು ಹೇಳಿದ್ದನ್ನೆಲ್ಲ ನಂಬಿದರೆ ಏನಾಗಬೇಕಿತ್ತೋ ಅದೇ ಆಗಿದೆ.

ಆದರೆ ಮುರುಘಾ ಶರಣರು ಯಾರಿಗೆ ಹಣ ಕೊಟ್ಟಿದ್ದಾರೆ ಎಂಬುದಷ್ಟೆ ಮುಖ್ಯ. ನಕ್ಸಲ್ ನಾಯಕ ಗದ್ದರ್ ಎಂಬ ವ್ಯಕ್ತಿಗೆ ಬಸವಶ್ರೀ ಪ್ರಶಸ್ತಿ ಕೊಟ್ಟಾಗ ಇಡೀ ಸಮಾಜ, ಸ್ವತಃ ಸ್ವಾಮೀಜಿಯವರ ಸಮಾಜವಾದ ಲಿಂಗಾಯಿತರೆಲ್ಲಿ ಸಿಹಪಾಲು ಜನ ವಿರೋಧ ಮಾಡಿದ್ದರು. ಆದರೂ ಮಾದ್ಯಮಗಳು ಅವರನ್ನು ಸಮರ್ಥನೆ ಮಾಡಿಕೊಂಡಿದ್ದವು. ಜನರಿಗೆ ಒಪ್ಪಿಸಿದ್ದವು. ಅಮವಾಸ್ಯೆಯ ದಿನ ಅಮಾಯಕರಿಗೆ ಮದುವೆ ಮಾಡಿಸಿದರೂ ಅದನ್ನು ಮಾದ್ಯಮಗಳು ಸಮರ್ಥನೆ ಮಾಡಿಕೊಂಡಿದ್ದವು ಆದರೂ ಸ್ವಾಮೀಜಿ ಪತ್ರಕರ್ತರು ನಾಯಿಗಳು ಎಂದದ್ದು ಯಾಕೆ ಎಂಬುದಷ್ಟೇ ಇಲ್ಲಿ ಗಮನಿಸಬೇಕಾದ ಅಂಶ.

ಸ್ವಾಮೀಜಿ ಆ ಮಾತುಗಳನ್ನು ಹೇಳುವಾಗ ಅವರಲ್ಲಿ ಬೇಸರವಿತ್ತು. ಅವರ ಮಾತುಗಳು ಎಲ್ಲೋ ಒಂದು ಕಡೆ ಚಿತ್ರದುರ್ಗದ ಪತ್ರಕರ್ತರನ್ನೇ ಬೊಟ್ಟು ಮಾಡಿ ತೋರಿಸುತ್ತವೆ. ವಸೂಲಿ ಮಾಡಿರುವ ಪತ್ರಕರ್ತರಿರುವುದರಿಂದಲೇ ಈ ಮಾತುಗಳು ಅವರಿಂದ ಬಂದಿರುವುದು. ಸ್ವಾಮೀಜಿ ಏನು, ಯಾರು ಎಂಬ ಪೂರ್ವಾಪರಗಳನ್ನು ಬಿಟ್ಟು ಅವರನ್ನು ನಾಯಕರಾಗಿ ಬಿಂಬಿಸಿದ, ಹಾಗೂ ಅವರಿಂದ ವಸೂಲಿ ಮಾಡಿದವರು ಯಾರೆಂಬುದು ಸಮಾಜಕ್ಕೆ ಗೊತ್ತಾಗಬೇಕಿದೆ.

ಶಿವಮೂರ್ತಿ ಶರಣರು ಇನ್ನು ಒಂದು ಹೆಜ್ಜೆ ಮುಂದಿಟ್ಟು ನೇರವಾಗಿ ವಸೂಲಿ ಮಾಡಿಕೊಂಡಿರುವ ವೀರರನ್ನು ಬಹಿರಂಗಪಡಿಸಿಬಿಟ್ಟರೆ ಈಗ ಅವರ ಮೇಲೆ ಮುನಿಸಿಕೊಂಡಿರುವ ಪತ್ರಕರ್ತರು ಸರಿಯಾಗಬುದೇನೊ ಎಂಬ ಭಾವನೆಯಿದೆ. ಸ್ವಾಮೀಜಿ ಧೈರ್ಯ ಮಾಡುವಿರಾ...