Saturday, October 2, 2010

ದೇಶದ ಜನರು ಗೆದ್ದರು, ಅಲಹಬಾದ್ ಹೈಕೋರ್ಟ್ ಕೂಡಾ ಗೆದ್ದು ಬಿಟ್ಟಿತು

ಅಲಹಬಾದ್ ಹೈಕೋರ್ಟ್ ಕೊನೆಗೂ ಗೆದ್ದು ಬಿಟ್ಟಿತು.

 ಹಿಂದು ಹಾಗೂ ಮುಸ್ಲಿಂ ಇಬ್ಬರ ನಡುವೆ ಯಾರ ಕಡೆಗೆ ಅಯೋಧ್ಯೆ ಒಲಿಯುತ್ತದೆ ಎಂಬ ಕುತೂಹಲ ಬಾಬ್ರಿ ಮಸೀದಿ ನೆಲಸಮವಾದ ದಿನದಿಂದ ಎಲ್ಲರ ತಲೆಯಲ್ಲಿ ಗಟ್ಟಿಯಾಗಿ ಕುಳಿತು ಬಿಟ್ಟಿತ್ತು.

ಆದರೆ ಆಗಿದ್ದೇ ಬೇರೆ. ಇಲ್ಲಿ ಯಾರು ಗೆಲ್ಲಲಿಲ್ಲ, ಅಲಹಬಾದ್ ಹೈಕೋರ್ಟ್ ಗೆದ್ದು ಬಿಟ್ಟಿತು. ಇಡೀ ದೇಶದ ಜನ ಈ ತೀರ್ಪನ್ನು ಮೆಚ್ಚಿದ್ದಾರೆ. ಅಯೋಧ್ಯೆಯನ್ನು ಬಹುವಾಗಿ ಅಚ್ಚಿಕೊಂಡಿದ್ದ ಜನರಲ್ಲಿ ಇತ್ತೀಚೆಗೆ ಬಂದಿದ್ದ ಭೋಪಾಲ್ ದುರಂತದ ತೀರ್ಪನ್ನು ನೋಡಿ ಎಲ್ಲೊ ಒಂದು ಕಡೆ ಆತಂಕವಿತ್ತು.

ಇದಷ್ಟೇ ಅಲ್ಲದೇ ಇಡೀ ದೇಶದಲ್ಲಿ ತೀರ್ಪು ಬಂದ ಮರು ಕ್ಷಣದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಸಾವಿರಾರು ಜನರ ಮಾರಣ ಹೋಮ ನಡೆಯುತ್ತದೆ ಎಂಬ ಭಯಂಕರವಾದ ಭಯವಿತ್ತು. ಆದರೆ ಅದೇನು ನಡೆಯಲಿಲ್ಲ. ಕೆಲವರಂತು ಇನ್ನು 15 ದಿನಗಳ ಕಾಲ ಬಂದ್ ಆಗುತ್ತದೆ ಬೈಕಿಗೆ ಪೆಟ್ರೋಲ್ ತುಂಬಿಸಿಕೊಳ್ಳಬೇಕು. ಮೊಬೈಲ್ಗೆ ಕರೆನ್ಸಿ ಹಾಕಿಸಬೇಕು ಎಂದು ಓಡಾಡಿ ಎಲ್ಲದಕ್ಕೂ ರೆಡಿಯಾಗಿದ್ದ ಘಟನೆಯನ್ನು ನೋಡಿದವರಲ್ಲು ಗಾಬರಿ ಮನೆ ಮಾಡುತ್ತಿತ್ತು.

ದೇಶದ ಜನ ಗೆದ್ದಿದ್ದಾರೆ,ತೀರ್ಪನ್ನು ಮೆಚ್ಚಿದ್ದಾರೆ. ಆದರೆ ಸುನ್ನಿ ವಕ್ಫ್ ಬೋರ್ಡ್ ಇದನ್ನು ಒಪ್ಪಿಕೊಳ್ಳಬೇಕಿತ್ತು. ಕಾರಣ ಒಂದು ಕೋರ್ಟ್ ಶ್ರೀರಾಮ ಅಯೋಧ್ಯೆಯಲ್ಲಿದ್ದಿದ್ದು ನಿಜ. ಅವನು ಅಲ್ಲಿ  ಹುಟ್ಟಿದ್ದು ನಿಜ ಎಂದು ಒಪ್ಪಿಕೊಂಡಿದೆ. ಆದರೂ ಇವರು ಮುಂದುವರೆದಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತದೆ.

ಅವರು ಮುಂದುವರೆದಿದ್ದನ್ನು ನೋಡಿ ಹಿಂದೂ ಮಹಾ ಸಭಾ ಕೂಡಾ ಈಗ ಮೂರನೇ ಒಂದು ಭಾಗ ಕೊಟ್ಟಿರುವುದನ್ನು ವಿರೋಧಿಸಿ ಸುಪ್ರೀಂ ಮೆಟ್ಟಲೇರಲು ಹೊರಟಿರುವುದು ಗಮನಿಸಬೇಕಾದ ಅಂಶ. ಇಲ್ಲಿ ಕೋರ್ಟ್ ಕೂಡಾ ದೇಶದಲ್ಲಿ ಹಿಂಸಾಚಾರ ಸಂಭವಿಸುವುದು ಬೇಡ ಮತ್ತು ಅವರಿಗೆ ಬೇಸರವಾಗುವುದು ಬೇಡ ಉದ್ದೇಶದಿಂದ ಸುನ್ನಿ ವಕ್ಫ್ ಬೋರ್ಡ್ ಗೆ ಭಾಗ ಕೊಟ್ಟಿದೆ ಎಂಬ ಮಾತುಗಳು ಜನ ಸಾಮಾನ್ಯರ ನಡುವುನಿಂದ ಕೇಳಿ ಬರುತ್ತಿವೆ.

ಕೊನೆಯದಾಗಿ ಕರುಣಾನಿಧಿ ನೆನಪಿಗೆ ಬರುತ್ತಾರೆ. ಕಾರಣ ಈ ಹಿಂದೆ ರಾಮಸೇತು ವಿವಾದವಾಗಿದ್ದಾಗ ರಾಮ ಇದ್ದಿದ್ದು ಸುಳ್ಳು, ಅವನು ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದ ಎಂಬ ಅವರಷ್ಟೇ ತೂಕದ ಪ್ರಶ್ನೆ ಎತ್ತಿದ್ದರು. ಈಗ ಅಲಹಬಾದ್ ಹೈಕೋರ್ಟ್ ಸರಿಯಾದ ಉತ್ತರ ಕೊಟ್ಟದೆ.

No comments:

Post a Comment