Friday, May 6, 2011

ಉಜಿರೆ ಕಾಲೇಜು, ಮಸಾಲೆ ಕಾಫಿ, ಶಾರದ ಮಂಟಪ ಇನ್ನೂ ಇದೆ

ಒಂದು ವರ್ಷದ ಹಿಂದೆ ನಾವು ಕಾಲೇಜನ್ನು ಬಿಟ್ಟು ಬರುವ ಮೊದಲು ಬರೆದ 6ನೇ ಸೆಮಿಸ್ಟರ್ ಪರೀಕ್ಷೆಯ ಸಂದರ್ಭ. ಅದಾಗಲೇ ಮನದ ಯಾವುದೋ ಒಂದು ಮೂಲೆಯಲ್ಲಿ ಒಳ್ಳೆಯ ಕೆಲಸ ಸೇರುವ ಆಸೆ. ನಾವು ಪತ್ರಿಕೋದ್ಯಮದಲ್ಲಿ ಏನೋ ಸಾಧಿಸಿ ಬಿಡುತ್ತೇವೆನೋ ಎಂಬ ಭ್ರಮೆಯಲ್ಲಿ ಹೊರ ಬಂದಿದ್ದೆವು. ಸಾಕಷ್ಟು ಬರೆಯಬೇಕೆಂಬ ಹಂಬಲ ಆಗಲೂ ಇತ್ತು ಇಗಲೂ ಇದೆ. ಆದರೆ ಒತ್ತಡದ ಜೀವನದಲ್ಲಿ ದಿನ ನಿತ್ಯ ಪುಟವೊಂದನ್ನು ತುಂಬಿಸಬೇಕಾದ ಅನಿವಾರ್ಯತೆಯಲ್ಲಿ ಮುಳುಗಿ ಹೋಗಿ ದೀರ್ಘವಾದ ಲೇಖನಗಳನ್ನು ಬರೆಯಲು ಯೋಚಿಸಿದರೆ ವಿಷಯವೇ ಹೊಳೆಯದಂತಾಗುತ್ತದೆ. ಆದರೂ ಅನಿವಾರ್ಯವಾಗಿ ಒಮ್ಮೊಮಮ್ಎ ಬರೆಯಬೇಕೆಂಬ ಹಠದಲ್ಲಿ ಕುಳಿತು ಒಂದೇ ಉಸಿರಲ್ಲಿ ಬರೆದು ಬರೆದ ಕ್ಷಣದಲ್ಲೇ ಮೇಲ್ ಮಾಡಿ ನಿಟ್ಟುಸಿರು ಬಿಡುವಂತಾಗುತ್ತದೆ. ಅದು ಕೂಡಾ ಪ್ರಕಟವಾಗಿ ಬಿಡುತ್ತದೆ. ಅದೇ ಆಶ್ಚರ್ಯ.

ಉಜಿರೆ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳು ಜೀವನವಿಡಿ ಮರೆಯಲಾರದಂತಿವೆ. ಕಾಲೇಜಿನಲ್ಲಿರುವವರೆಗೆ ಎಲ್ಲರನ್ನೂ ಬ್ಐದುಕೊಂಡು ಓಡಾಡುತ್ತಿದ್ದ ನಮಗೆ ಹೊರಗೆ ನಿಂತು ಈಗ ನೋಡಿದಾಗ ಅದೆಲ್ಲವೂ ಸರಿ. ಅದು ಹಾಗೇ ಇರಬೇಕಾಗಿತ್ತು ಅಂತ ಅನ್ನಿಸುತ್ತದೆ. ಕಾಲೇಜು ತುಂಬ ದೊಡ್ಡದೊಂದು ಗೆಳೆಯರ ಬಳಗವನ್ನು ಕಟ್ಟಿಕೊಂಡು ರಾತ್ರಿ ಬೆಳಗಾದರೂ ಜೊತೆಗೆ ಯಾರೋ ಒಬ್ಬನ ರೂಮಿನಲ್ಲಿ ಮಲಗಿಕೊಂಡು ದಿನ ಕಳೆಯುತ್ತಿದ್ದುದ್ದ ಈಗ ಮತ್ತೆ ಮತ್ತೆ ಕಾಡುತ್ತದೆ. ಕಾಲೇಜಿನ ಕಾರಿಡಾರುಗಳು ಮತ್ತೆ ಕಣ್ಣ ಮುಂದೆ ಹಾದು ಹೋಗುತ್ತವೆ.

ಪ್ರತಿ ದಿನ ಕಾಲೇಜು ಬಿಟ್ಟ ನಂತರ ಸಂಜೆ 6 ಅಥವಾ 7ರ ಹೊತ್ತಿಗೆ ಮತ್ತೆ ಕಾಲೇಜಿನ ಕಡೆ ಹೋಗಿ ಜೋಶಿಯ ಜೊತೆ ಸೇರಿಕೊಂಡು ಹರಟುತ್ತಾ ಕಾಲೇಜು ಎದುರಿರುವ ಕ್ಯಾಂಟೀನಿನಲ್ಲಿ ಖಾಲಿ ದೋಸೆ ತಿಂದು ಮಸಾಲೆ ಕಾಫೀ ಹೀರಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತಿದೆ. ಕಾಲೇಜಿನ ಅಧ್ಯಕ್ಷನಾಗಿದ್ದ ರವಿಪ್ರಸಾದನ ಜೊತೆ ಅವನ ಅವಸರದಲ್ಲಿ ಕಾಲೇಜಿನ ಕಾರೀಡಾರುಗಳಲ್ಲಿ ಕಂಡು ಕಾಣದೇ ಹೋಗುತ್ತಿದ್ದುದ್ದು, ರಾತ್ರಿ 2 ಗಂಟೆಯವರೆಗೆ ಶಾರದ ಮಂಟಪದಲ್ಲಿ ಕ್ರಿಕೇಟ್ ಆಡಿ ಭರತಣ್ಣನಲ್ಲಿ ಮಂಗಳಾರತಿ ಮಾಡಿಸಿಕೊಳ್ಳುವುದು, ಸಚಿನ್ ಕದ್ದು ಕದ್ದ ಕಾಲೇಜಿನ ಕಾರಿಡಾರುಗಳಲ್ಲಿ ಇಂದಿಗೂ ನನಗೆ ಗೊತ್ತಾಗದಂತೆ ಯಾರಿಗೋ ಲೈನ್ ಹೊಡೆಯುತ್ತಿದ್ದುದ್ದು, ನಾಯಿಗಳನ್ನು ಕಂಡರೆ ಸಾಕು ಇವನು ಅದೇ ಆಗುತ್ತಿದ್ದ ಹರ್ಷ. ಅವನ ಜೊತೆಗೆ ಇನ್ನೊಬ್ಬ ಡೀಸೆಂಟ್ ಹರ್ಷ. ಇವರಿಬ್ಬರ ಜೊತೆ ಕ್ರಿಮಿನಲ್ ರುದ್ರೇಶ್, ಉದ್ದ ಕೂದಲು ಬಿಟ್ಟು ತಣ್ಣಗೆ ಬಾಂಬು ಸಿಡಿಸುತ್ತಿದ್ದ ಕಿರಣ್ ಜೋಶಿ, ಸದಾ ಅಮಾಯಕನಾಗಿ ಗಡಿಬಿಡಿಯಲ್ಲಿರುತ್ತಿದ್ದ ಶಿವಪ್ರಸಾದ್ ಅವನ ಜೊತೆಗೆ ಅದೇ ದಾರಿಯಲ್ಲಿ ಬರುತ್ತಿದ್ದ ರಮೇಶ, ರಮೇಶನನ್ನು ಸದಾ ರೇಗಿಸುತ್ತಿದ್ದ ನನ್ನ ದೋಸ್ತ್ ದೀಕ್ಷಿತ್, .ನಾನು ಮೂರು ವರ್ಷ ಉಸಿರಾಡಿದ ಶಾರದ ಮಂಟಪ....... ಇನ್ನೂ ಇದೆ,

1 comment:

  1. "ಹ..!!.ಹ..!!.ಹ..!!.ಸ್ವಾಮಿಗಳೇ ಏನು ಅನಾಮತ್ತಾಗಿ ಕ್ರಿಮಿನಲ್ ಪಟ್ಟ ಕೊಟ್ಟಿದ್ದಿರ ನಮಗೆ"

    ReplyDelete