
ಅದನ್ನು ತಪ್ಪಿಸಲು ಇರುವ ಒಂದೇ ಮಾರ್ಗ ನಾಳೆ ಬಾ ಮುಂದೆ ಹೋಗು. ಹೀಗೆ ಮನೆಯ ಮುಂದಿನ ಬಾಗಿಲಿನ ಮೇಲೆಯೋ ಅಥವಾ ಗೋಡೆಯ ಮೇಲೆಯೋ ಬರೆದರೆ ಅದು ನೋಡಿಕೊಂಡು ನಾಳೆ ಬಂದು ನೋಡಿಕೊಳ್ಳುತ್ತೇನೆ ಅಂತ ವಾಪಾಸು ಹೋಗುತ್ತೇ. ದಿನಾಲೂ ಇದೇ ಬರಹವನ್ನು ನೋಡಿ ಮುಂದೆ ಹೋಗುತ್ತದೆ ಎಂದರು ತಿಳಿದವರು. ಅದಕ್ಕೆ ಅಲ್ಲಿಂದ ಒಂದು ಚಾಪೀಸ್ ಕದ್ದು ತಂದು ನಮ್ಮ ಮನೆಯ ಬಾಗಿಲಿನ ಮೇಲೆ ಬರೆದಿದ್ದೇ.
ಮೊನ್ನೆ ರಾತ್ರಿ ಊರಿನ ಕೆಲ ಹುಡುಗರು ಒಟ್ಟಿಗೆ ಕುಳಿತು ಅದು ಇದು ಅಂತ ಹರಟೆ ಒಡೆಯುತ್ತಿದ್ದೆವು. ಆ ಹರಟೆಯಲ್ಲಿ ಈ ನಾಳೆ ಬಾ ಮುಂದೆ ಹೋಗು ಬಂದು ಬಿದ್ದು ಬಿದ್ದು ನಕ್ಕಿದ್ದೆವು. ಯಾಕೆ ನಾವೆಲ್ಲಾ ಹಾಗೇ ಬರೆದೆವು ಎಂಬ ಚಿಂತನೆಗೆ ತೊಡಗಿದ ನಮ್ಮ ಯುವ ಪಡೆ, ಆಗ ಈಗಿನಂತೆ ಊರತುಂಬ ಕರೆಂಟಿರಲಿಲ್ಲ. ಅದರಿಂದ ಬೆಳಕಿರಲಿಲ್ಲ. ನಾವು ಈಗ ಕುಳಿತು ಮಾತಾಡುತ್ತಿರುವ ಈ ಸೇತುವೆ ಕಟ್ಟೆವರೆಗೂ ಆಗ ಬರುತ್ತಿರಲಿಲ್ಲ. ಇದು ಒಂದು.
ಮತ್ತೆ ಊರಿನಲ್ಲಿ ಯಾರಾದರೂ ಸತ್ತರೆ, ಅದರಲ್ಲೂ ಮದುವೆ ಆಗದವರು ಹೇಳಿ ಕೇಳಿ ವಯಸ್ಸಿಗೆ ಬಂದ ಹುಡುಗಿಯರು ಸತ್ತರೆ ಸತ್ತ ಮನೆಯ ಮುಂದು ಯಾರು ಸುಳಿಯುತ್ತಿರಲಿಲ್ಲ. ಆ ಕೇರಿಯ ಕಡೆಗೂ ನೋಡದೇ ಓಡಿ ಹೋಗುವ ಸ್ಥಿತಿಯದು. ನನ್ನ ಮನೆಯ ಮುಂದೆ ಹಾಳು ಬಿದ್ದ ತೋಟ. ಕತ್ತಲು ಕವಿದಿರುತ್ತಿತ್ತು. ಒಮ್ಮೊಮ್ಮೆ ಬಾರಿ ಧೈರ್ಯ ಬಂದಾಗ ಗಟ್ಟಿ ಮನಸ್ಸು ಮಾಡಿ ಆ ತೋಟದ ಕಡೆಗೆ ನೋಡುತ್ತಿದ್ದೇ.ಅಲ್ಲಿಂದ ಹೊರ ಹೊಮ್ಮುತ್ತಿದ್ದ ಗೋಬೆ ಸೇರಿದಂತೆ ಇತರೆ ಪಕ್ಷಿಗಳ ಕೂಗಾಟವನ್ನು ಕೇಳಿಯೇ ಗಡಗಡ ಶುರುವಾಗುತ್ತಿತ್ತು.
ದೆವ್ವದ ಕಥೆಗಳು ಕೇಳುವುದಕ್ಕಂತು ಬಲು ಇಷ್ಟ. ಆದರೆ ಕತ್ತಲೆಯಲ್ಲಿ ಒಬ್ಬನೇ ಇದ್ದಾಗ ಆ ಕಥೆಗಳು ನೆನಪಾಗುವುದು ನಿಶ್ಚಿತ. ಇದೇ ರೀತಿಯಲ್ಲಿ ನಮ್ಮೂರಿನ ಕೋಡಿಸರ ಎಂದಾಕ್ಷಣ ಅರ್ಧ ಜನ ದೂರ ಹೋಗಿಬಿಡುತ್ತಿದ್ದರು. ಕಾರಣ ಸತ್ತವರನ್ನೆಲ್ಲಾ ಅಲ್ಲಿಯೇ ಸುಡುತ್ತಿದ್ದುದು. ಅಲ್ಲಿ ದೆವ್ವಗಳ ನರ್ತನವಾಗುತ್ತದೆ ಎಂಬ ನಂಬಿಕೆ.
ಆದರೆ ಹಳ್ಳಿಗಳಲ್ಲೂ ಕ್ರಮೇಣ ಈ ಹೆದರಿಕೆ ಕಡಿಮೆಯಾಗುತ್ತಿದೆ. ಕಾರಣ ಮುಂದುವರೆದಂತೆ ಹೊಲಗಳಿಗೆ ನೀರಾವರಿ ಮಾಡಿಕೊಂಡು ರಾತ್ರಿಯ ವೇಳೆಯಲ್ಲೂ ಕರೆಂಟಿನ ಅಭಾವಕ್ಕೆ ಹೆದರಿ ನೀರಾಯಿಸುವ ನೆಪದಲ್ಲಿ ದೆವ್ವಗಳು ಮಾಯವಾಗಿವೆ. ಆದರೆ ಒಂದು ಅನುಮಾನ. ನಮ್ಮ ಹಿಂದಿನವರು ದೆವ್ವಗಳ ಕುರಿತಾಗಿ ವರ್ಣ ರಂಜಿತ ಕಥೆಗಳನ್ನು ಹೇಳುತ್ತಿದ್ದರು. ನಾನ ುದೆವ್ವವನ್ನು ನೋಡಿದ್ದೆ, ಹೆದರಿಸಿದ್ದೆ ಅಂತ ಹೇಳುವುದು ಸ್ಕೋಪ್ ಕಾರಣಕ್ಕಾಗಿಯೇನೋ ಎಂಬ ಅನುಮಾನ ಇತ್ತೀಚೆಗೆ ಕಾಡುತ್ತಿದೆ.
ಊರ ಅನುಭವಗಳು ಇನ್ನು ಇವೆ ಮತ್ತೆ ಬರೆದುಕೊಳ್ಳುತ್ತೇನೆ.....
No comments:
Post a Comment