Sunday, December 19, 2010

ಅಮವಾಸ್ಯೆಯ ದಿನ ಅಮಾಯಕರಿಗೆ ಮದುವೆ ಮಾಡಿಸಿದ್ದು ಸಮರ್ಥನೆಯಾಗಿತ್ತು.

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಇತ್ತೀಚೆಗೆ ಶಿವಮೊಗ್ಗದಲ್ಲಿ ಹೇಳಿದ ಒಂದು ಹೇಳಿಕೆ ಪತ್ರಕರ್ತರು ನಾಯಿಗಳು, ಅವರು ವಸೂಲಿ ವೀರರು ಎಂಬ ಮಾತುಗಳನ್ನು ಅವರಾಡಿದ್ದಾರೆ. ಆದರೆ ಈ ಮಾತುಗಳನ್ನು ಅವರು ಹೇಳುವಾಗ ಯಾವ ಉದ್ದೇಶದಿಂದ ಹೇಳಿದ್ದಾರೆ ಎಂಬುದು ಸ್ಪಸ್ಟವಾದರೆ ಮಾತ್ರ ಅವರ ಮಾತು ಹಾಗೂ ಹೇಳಿಕೆಯ ಹಿನ್ನೆಲೆ ಅರ್ಥವಾಗುತ್ತಿತ್ತು.

ಶರಣರು ಪತ್ರಕರ್ತರನ್ನು ನಾಯಿಗಳು ಎಂದು ಹೇಳಿದಾಕ್ಷಣ ಎಲ್ಲೆಡೆಯಿಂದಲೂ ಅವರನ್ನು ವಿರೋಧಿಸುವ ಕೆಲಸ ಆರಂಬವಾಯಿತು. ಆದರೆ ಯಾರು ಕೂಡಾ ಪಟ್ಟು ಹಿಡಿದು ಯಾರಿಗೆ ಈ ಮಾತನ್ನು ಹೇಳಿದ್ದೀರಿ..? ಯಾವ ಉದ್ದೇಶದಿಂದ ಹೇಳಿದ್ದೀರಿ ಎಂದು ಕೇಳಲಿಲ್ಲ. ಆದರೆ ಎಲ್ಲೋ ಒಂದು ಕಡೆ ಸಣ್ಣ ಸಂದೇಹ ಕಾಡುತ್ತದೆ. ಸ್ವಾಮೀಜಿ ಏನು ಮಾಡಿದರೂ ಅದು ಒಂದು ಕ್ರಾಂತಿಕಾರಿ ಹೆಜ್ಜೆ ಎಂಬಂತೆ ಬಿಂಬಿಸಿದ ಪತ್ರಕರ್ತರು ಇವತ್ತು ಅವರನ್ನೇ ವಿರೋಧಿಸುತ್ತಿದ್ದಾರೆಂದರೆ ಈ ಕ್ರಾಂತಿಕಾರಿ ಹೆಜ್ಜೆಯಿಡಲು, ಎಲ್ಲೆಲ್ಲೂ ಬಸವಣ್ಣನ ಇನ್ನೊಂದು ರೂಪ ಎಂದೆಲ್ಲಾ ಹೇಳಿಸಿಕೊಳ್ಳಲು ಶಿವಮೂರ್ತಿ ಶರಣರು ಎಷ್ಟು ಹಣ ಖರ್ಚು ಮಾಡಿರಬಹುದು...?

ಬಹಳ ಬಹಿರಂಗವಾಗಿ ಉಳಿದಿರುವ ಒಂದು ಸತ್ಯವೆಂದರೆ ಇತ್ತೀಚೆಗೆ ಮಾದ್ಯಮಗಳು ಪುಕ್ಸಟ್ಟೆ ಯಾರನ್ನೂ ಹೀರೋ ಮಾಡುವುದಿಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅವನು ದೇಶದ ದೊಡ್ಡ ಜನನಾಯಕನಾಗಿಬಿಡಬಹುದು ಅಂಥಹ ಒಂದು ಶಕ್ತಿ ಇಂದು ಮಾದ್ಯಮಗಳಿಗಿದೆ. ಅದು ಜನರೇ ಪಾಲಿಸಿದ್ದು. ಮಾದ್ಯಮಗಳು ಹೇಳಿದ್ದನ್ನೆಲ್ಲ ನಂಬಿದರೆ ಏನಾಗಬೇಕಿತ್ತೋ ಅದೇ ಆಗಿದೆ.

ಆದರೆ ಮುರುಘಾ ಶರಣರು ಯಾರಿಗೆ ಹಣ ಕೊಟ್ಟಿದ್ದಾರೆ ಎಂಬುದಷ್ಟೆ ಮುಖ್ಯ. ನಕ್ಸಲ್ ನಾಯಕ ಗದ್ದರ್ ಎಂಬ ವ್ಯಕ್ತಿಗೆ ಬಸವಶ್ರೀ ಪ್ರಶಸ್ತಿ ಕೊಟ್ಟಾಗ ಇಡೀ ಸಮಾಜ, ಸ್ವತಃ ಸ್ವಾಮೀಜಿಯವರ ಸಮಾಜವಾದ ಲಿಂಗಾಯಿತರೆಲ್ಲಿ ಸಿಹಪಾಲು ಜನ ವಿರೋಧ ಮಾಡಿದ್ದರು. ಆದರೂ ಮಾದ್ಯಮಗಳು ಅವರನ್ನು ಸಮರ್ಥನೆ ಮಾಡಿಕೊಂಡಿದ್ದವು. ಜನರಿಗೆ ಒಪ್ಪಿಸಿದ್ದವು. ಅಮವಾಸ್ಯೆಯ ದಿನ ಅಮಾಯಕರಿಗೆ ಮದುವೆ ಮಾಡಿಸಿದರೂ ಅದನ್ನು ಮಾದ್ಯಮಗಳು ಸಮರ್ಥನೆ ಮಾಡಿಕೊಂಡಿದ್ದವು ಆದರೂ ಸ್ವಾಮೀಜಿ ಪತ್ರಕರ್ತರು ನಾಯಿಗಳು ಎಂದದ್ದು ಯಾಕೆ ಎಂಬುದಷ್ಟೇ ಇಲ್ಲಿ ಗಮನಿಸಬೇಕಾದ ಅಂಶ.

ಸ್ವಾಮೀಜಿ ಆ ಮಾತುಗಳನ್ನು ಹೇಳುವಾಗ ಅವರಲ್ಲಿ ಬೇಸರವಿತ್ತು. ಅವರ ಮಾತುಗಳು ಎಲ್ಲೋ ಒಂದು ಕಡೆ ಚಿತ್ರದುರ್ಗದ ಪತ್ರಕರ್ತರನ್ನೇ ಬೊಟ್ಟು ಮಾಡಿ ತೋರಿಸುತ್ತವೆ. ವಸೂಲಿ ಮಾಡಿರುವ ಪತ್ರಕರ್ತರಿರುವುದರಿಂದಲೇ ಈ ಮಾತುಗಳು ಅವರಿಂದ ಬಂದಿರುವುದು. ಸ್ವಾಮೀಜಿ ಏನು, ಯಾರು ಎಂಬ ಪೂರ್ವಾಪರಗಳನ್ನು ಬಿಟ್ಟು ಅವರನ್ನು ನಾಯಕರಾಗಿ ಬಿಂಬಿಸಿದ, ಹಾಗೂ ಅವರಿಂದ ವಸೂಲಿ ಮಾಡಿದವರು ಯಾರೆಂಬುದು ಸಮಾಜಕ್ಕೆ ಗೊತ್ತಾಗಬೇಕಿದೆ.

ಶಿವಮೂರ್ತಿ ಶರಣರು ಇನ್ನು ಒಂದು ಹೆಜ್ಜೆ ಮುಂದಿಟ್ಟು ನೇರವಾಗಿ ವಸೂಲಿ ಮಾಡಿಕೊಂಡಿರುವ ವೀರರನ್ನು ಬಹಿರಂಗಪಡಿಸಿಬಿಟ್ಟರೆ ಈಗ ಅವರ ಮೇಲೆ ಮುನಿಸಿಕೊಂಡಿರುವ ಪತ್ರಕರ್ತರು ಸರಿಯಾಗಬುದೇನೊ ಎಂಬ ಭಾವನೆಯಿದೆ. ಸ್ವಾಮೀಜಿ ಧೈರ್ಯ ಮಾಡುವಿರಾ...

Sunday, December 12, 2010

ಬೋರಾಗುತ್ತಿದೆ.....ಮುಂದಕ್ಕೆ ಹೋಗಲು ಸಿದ್ಧನಾಗುತ್ತಿದ್ದೇನೆ

ಇಲ್ಲಿ ಯಾವೂದನ್ನು ಉಳಿಸಿಕೊಳ್ಳಲಿಕ್ಕಾಗುವುದಿಲ್ಲ. ಶಾಶ್ವತವಾಗಿ ಎಂಬುದು ಒತ್ತಟ್ಟಿಗಿರಲಿ ಸರಿಯಾಗಿಯೂ ಉಳಿಸಿಕೊಳ್ಳಲಿಕ್ಕಾಗುವುದಿಲ್ಲ. ಒಂದು ಸಿಕ್ಕಿ ನಿಟ್ಟುಸಿರು ಬಿಡುವಷ್ಟರಲ್ಲಿ ಇನ್ನೊಂದು ಸ್ಪರ್ಧೆ ಆರಂಭವಾಗಿಬಿಟ್ಟಿರುತ್ತದೆ. ಜೀವನ ಒಂದು ನಿರಂತರವಾದ ರೇಸ್. ಓಡಿ ಓಡಿ ಸಾಕಾಗುತ್ತದೆ. ನೆಮ್ಮದಿಯಾಗಿ ಒಂದು ಕಡೆ ಇದ್ದುಬಿಡೋಣವೆಂದರೆ ಮನಸ್ಸೆಂಬುದು ತನಗೆ ಬೇಕಾದಂತೆ ಆಟವಾಡಿಸಿಬಿಡುತ್ತದೆ.


ಬೆಳೆಗ್ಗೆ ಇನ್ನೂ ಯಾವೂದಕ್ಕೂ ತಲೆಯನ್ನೇ ಕೊಡಬಾರದು ಎಂದು ಹೇಳುವ ಮನಸ್ಸು ಸಂಜೆಯ ಹೊತ್ತಿಗೆ ಒಳಗಿನಿಂದಲೇ ಕ್ರಾಂತಿ ಆರಂಭಿಸಿಬಿಡುತ್ತದೆ. ಬೆಳೆಗ್ಗೆಯೋ ಅಥವಾ ಸಂಜೆಯೋ ಒಂದು ನಿರ್ಧಾರವನ್ನು ತೆಗೆದುಕೊಂಡರೆ ಅದು ಮರು ಕ್ಷಣ ಸವಕಲಾಗಿಬಿಡುತ್ತದೆ. ಯಾರೋ ಒಬ್ಬರು ಆದರ್ಶಗಳಿಗಾಗಿ ಸತ್ತರು ನಾನ್ಯಾಕೆ ಹಾಗೇ ಸಾಯಬೇಕು. ಅವರು ಮಾಡಿದಂತೆಯೇ ನಾನ್ಯಾಕೆ ಮಾಡಬೇಕು ಎಂಬ ಸಣ್ಣ ಹಠ.

ಇಂದಿನ ದಿನಗಳಲ್ಲಿ ಆದರ್ಶಗಳೇನಿದ್ದರೂ ಹೇಳುವುದಕ್ಕೂ ಕೇಳುವುದಕ್ಕೂ ಹಾಗೂ ಹೊಗಳಲಿಕ್ಕೂ ಚೆಂದ. ಆಚರಣೆಗಲ್ಲ. ಆದರ್ಶಕ್ಕಾಗಿ ಬದುಕಿದರೆ ಜೀವನ ಪೂರ್ತಿಯಾಗಿ ಹೀಗೆ ಒದ್ದಾಡುತ್ತಿರಬೇಕು. ಆದರೆ ಒಂದೇ ಒಂದು ಸಾರಿಟಡ್ಡದಾರಿ ತುಳಿದುಬಿಟ್ಟರೆ ನಾನು ಜನನಾಯಕನಾಗಿಬಿಡುತ್ತೇನೆ. ಹಾಗೂ ಅವತ್ತು ಅಡ್ಡದಾರಿಯಲ್ಲಿ ಹೋದವರೆ ಸಮಾಜಕ್ಕೆ ಮಾರ್ಗದರ್ಶನ ಮಾಡಲು ನಿಂತಿರುವವರು. ಮಾಡಬಾರದ್ದನ್ನೆಲ್ಲಾ ಮಾಡಿ ಕೊನೆಗೆ ಇನ್ನೊಬ್ಬರಿಗಿ ನ್ಯಾಯ, ಧರ್ಮ ಹೇಳಲು ನಿಂತಿರುತ್ತಾರೆ. ಈ ಸ್ಥಿತಿಗೆ ಬರುವುದಕ್ಕೆ ನೀನು ಮಾಡಿದ ಕೆಲಸ ಹೇಳಪ್ಪ ಎಂದು ಕೇಳುವ ಮನಸ್ಸು ಕೂಡಾ ಬರುವುದಿಲ್ಲ. ಕಾರಣ ಆ ಕ್ಷಣಕ್ಕೆ ನಾನೂ ಕೂಡಾ ಅವನ ಬಳಿ ಒಳ್ಳೆಯವನಾಗಿಬಿಡಬೇಕು. ನಾಲ್ಕು ಜನರ ಎದುರು ಅವನ ಕೈ ನನ್ನ ಹೆಗಲ ಮೇಲಿರಬೇಕು.


ಮರುಕ್ಷಣ ಭ್ರಷ್ಠ ಅಂಥವನ ಕೈ ನನ್ನ ಹೆಗಲ ಮೇಲಿಟ್ಟುಕೊಂಡು ಓಡಾಡಿದರೆ ಆ ಕಳಂಕ ನನ್ನ ತಲೆಗೆಲ್ಲಿ ಅಂಟುವುದೆಂಬ ಭಯ.


ಆದರೆ ಒಂದೇ ಒಂದು ಉದಾಹರಣೆಯನ್ನು ಕೇಳಿದಾಕ್ಷಣ ನಾನು ಯಾಕೆ ಅವರಂತಾಗಬಾರದು. ಇಂಥಹ ಬಾಬು ತುಂಬ ಪ್ರಾಮಾಣಿಕ ಪತ್ರಕರ್ತ ಎಂದು ಯಾರೋ ಒಬ್ಬ ಮೂರನೇ ವ್ಯಕ್ತಿ ಹೇಳಿದಾಗ, ಛೇ ಎಷ್ಟು ಹಣವಿದ್ದರು ಜನರ ಬಾಯಲ್ಲಿ ಕೇವಲವಾಗುವುದಕ್ಕಿಂತ ಹೀಗೆ ನನ್ನ ಕಣ್ಣಿಗೆ ಕಾಣದ ವ್ಯಕ್ತಿಯೊಬ್ಬನಿಂದ ನಾನು ಸಾಚಾ ಎಂದು ಹೇಳಿಕೊಳ್ಲುವುದರಲ್ಲಿ ಎಷ್ಟು ಹಿತವಿದೆ. ಆದರೆ ಸಮಸ್ಯೆ ಎದುರಾದಾಗ ನನ್ನ ಒಳ್ಳೆಯತನ ಸಹಾಯಕ್ಕೆ ಬಾರದಿದ್ದರೆ ಸಾಚಾ ಆಗಿ ಯಾರಿಗೆ ಏನಾಗಬೇಕಿದೆ. ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲಿ ನನಗೇನು
 ಎಂಬ ಭಾವನೆ ಮನಸ್ಸಿನಲ್ಲಿ ಬಂದಾಗ ಮತ್ತೊಮ್ಮೆ ಯೋಚನೆಗಳು ತಲೆಕೆಳಗು.


ಹೀಗೆ ಮನಸ್ಸು ಎಲ್ಲೆಲ್ಲೊ ಅಟ್ಟಾಡಿಸಿಕೊಂಡು ಬರುತ್ತದೆ.

ಬೆಂಗಳೂರಿನಲ್ಲಿರುವ ತನಕ ಬೆಂಗಳೂರು ಬೇಡ. ಅಲ್ಲಿಂದ ಹೊರ ಬಂದು ಇಲ್ಲಿ ಏನು ಇಲ್ಲ ಅದಾಗ ಅದೇ ಚೆನ್ನಾಗಿತ್ತು. ಯಾವಾಗಲೂ ಎಲ್ಲಾ ಕ್ಷಣಗಳು ಎಣಿಕೆಯಂತೆ ಇರುವುದೇ ಇಲ್ಲ. ಅಯೋಮಯ. ಅಲ್ಲಿದ್ದಾಗ ಅವರು ನನ್ನನ್ನು ಶತ್ರು ತರ ನೋಡುತ್ತಾರೆ. ಇಲ್ಲಿಗೆ ಬಂದ ನಂತರ ಅವರು ಅಷ್ಟು ಬೈದದ್ದು ನನ್ನ ಹಿತಕ್ಕಾಗೇ. ಕಾರಣ ಅರಿಂದ ಬೈಸಿಕೊಂಡು ಒಳ್ಳೆಯವಾರಗಿ ಬದುಕುವವರನ್ನು ನೋಡಿದೆ. ದುರ್ಗಾ ಬೋರಾಗುತ್ತಿದೆ. ಅದಕ್ಕೆ ಹೀಗೆ.... ಮುಂದಕ್ಕೆ ಹೋಗುವ ಹಂಬಲ ಸಿದ್ಧನಾಗುತ್ತಿದ್ದೇನೆ...

Sunday, November 28, 2010

ಕಳ್ಳರ ಸಂತೆ ಅದರಲ್ಲಿ ಕುಮಾರಸ್ವಾಮಿಯದ್ದು ಒಂದು ಅಂಗಡಿ ಇದೆ

ಛೀ... ಥೂ...


        ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕ್ಕಿಂತ ದೊಡ್ಡ ಉದಾಹರಣೆ ಭಾರತದಲ್ಲಿ ಇನ್ನಲ್ಳೂ ಸಿಗಲಿಕ್ಕಿಲ್ಲ. ದುರ್ಬೀನು ಹಾಕಿ ಹುಡುಕಿದರೂ ಪ್ರಾಮಾಣಿಕರು ಸಿಗುವುದು ಅಪರೂಪವಾಗಿಬಿಟ್ಟದೆ. ಪ್ರಾಮಾಣಿಕರಿದ್ದರೂ ಈ ರಾಜಕೀಯ ನೋಡಿ ಸಪ್ಪಗಾಗಿ ಬಿಟ್ಟಿದ್ದಾರೆ. ಯಡಿಯೂರಪ್ಪನವರನ್ನು ಇಲ್ಲಿವರೆಗೇ ಕರ್ನಾಟಕದ ಜನತೆ ಬಹಳ ದೊಡ್ಡ ಮನುಷ್ಯ, ಹೋರಾಟಗಾರ ಹೀಗೆ ಇನ್ನೂ ಏನೇನೊ ತಿಳಿದುಕೊಂಡಿದ್ದರು. ಕಾರಣ ಅವರು ಬೆಳೆದು ಬಂದ ದಾರಿ.

  ಯಡಿಯೂರಪ್ಪ ಒಬ್ಬ ಮಾತ್ರ ಕಳ್ಳನಾಗಲಿಲ್ಲ ಬೆನ್ನಿಗಿದ್ದ ಸಂಘಟನೆಗೂ ಕೆಟ್ಟ ಹೆಸರು ತಂದಿಟ್ಟು ಇಂದು ಎಲ್ಲೂ ಸಂಘದ ಕಾರ್ಯಕರ್ತರು ಮಾತನಾಡದಂತಹ ಸ್ಥಿತಿಗೆ ತಂದಿಟ್ಟಿದ್ದಾರೆ. ಅಷ್ಟಕ್ಕೂ ಯಡಿಯೂರಪ್ಪ ಮಾಡಿದ್ದಕ್ಕೂ ಸಂಘಕ್ಕೂ ಸಂಬಂಧ ಏನು ಎಂದು ಪ್ರಶ್ನಿಸಬಹುದು. ಆದರೆ ನಿಮ್ಮ ಬಿಜೆಪಿ ಈ ಹಂತಕ್ಕೆ ಬರಲು ಕಾರಣ ಸಂಘದ ಕಾರ್ಯಕರ್ತರು ಹಳ್ಳಿಗೆ ಹೋಗಿ ದೇಶಭಕ್ತರ ಕಥೆಗಳನ್ನು ಹೇಳಿ ಜನರಲ್ಲಿ ರಾಷ್ಟ್ರೀಯ ವಿಚಾರಧಾರೆಗಳನ್ನು ತುಂಬಿಸಿ ಅವರನ್ನು ದೇಶಕ್ಕಾಗಿ ಬದುಕುವಂತೆ ಮಾಡುತ್ತಿರುವಾಗ ನಿಮ್ಮ ಬಿಜೆಪಿ ನಾವೇ ದೇಶ ಕಾಯುವವರು ಎಂದು ಪೋಸು ಕೊಟ್ಟುಕೊಂಡು ಸಂಘದವರು ನಿರ್ಮಿಸಿದ್ದ ವಾತವರಣವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ.

  ರಾಜಕೀಯದಲ್ಲಿ ಇರುವವರೆಲ್ಲರೂ ಕಳ್ಳರೇ ಎಂದು ಈಗ ಯಾರು ಬೇಕಾದರೂ ಘಂಟಾಘೋಷವಾಗಿ ಸಾರಬಹುದು. ಕಾರಣ ಬಿಜೆಪಿಯವರ ಭಯವಿಲ್ಲ. ಕಳ್ಳರ ಸಂತತಿಯೇ ಬಿಜೆಪಿ ಆಗಿದೆ. ಆಪರೇಷನ್ ಕಮಲದಿಂದ ಹಿಡಿದು ಈ ವರೆಗೆ ರಾಜ್ಯಕ್ಕೆ ಅನೇಕ ಹೊಸತನಗಳನ್ನು ತಂದ ಕೀರ್ತಿ ಮತ್ತು ಕಳಂಕ ಬಿಜೆಪಿಗೆ ಸೇರುತ್ತದೆ. ಕಾಂಗ್ರೇಸ್ ಹಾಗೂ ಜೆಡಿಎಸ್ ಅಥವಾ ಇನ್ಯಾವುದೇ ಪಕ್ಷಗಳು ದೇಶವನ್ನು ಇಷ್ಟು ವರ್ಷ ಆಳಿವೆ. ದೇಶವನ್ನು ಲೂಟಿ ಮಾಡಿವೆ ಎಂದು ಹೇಳಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಮುಕ್ಕಾಲು ಪಾಲು ಬಿಜೆಪಿಯವರು ಮಾಡಿದ್ದೇನು. ಇವತ್ತು ರಾಜ್ಯದ ಜನತೆ ನಿಮಗೆ ಮೇಲೆ ಮೊದಲಿಗೆ ಹೇಳಿದ ಹಾಗೇ ಛೀ.. ಥೂ ಎನ್ನುತ್ತಿದ್ದಾರೆ.

  ಕಳೆದ ಎರಡುವರೆ ವರ್ಷ ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳೂ ಈಗ ನೀರಿನಲ್ಲಿ ಹೋಮ ಮಾಡಿದಂತಾಗಿವೆ. ಜನ ನಿಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಮಾತು ಮಾತಿಗೂ ಭಾರತ ಮಾತೆ, ದೇಶಭಕ್ತರು ಅಂಥ ಹೇಳಿಕೊಂಡು ಇಂದು ದೇಶವನ್ನೇ ಮಾರುವ ಸ್ಥಿತಿಗೆ ಬಂದು ನಿಂತಿದ್ದಾರೆ ಬಿಜೆಪಿಯವರು. ಕಾರಣ ದೇಶಭಕ್ತರು ಬಿಜೆಪಿಯವರು ಮಾತ್ರ ಆದ್ದರಿಂದ ಆ ದೇಶವನ್ನು ಅವರೇ ಮಾರಿಕೊಳ್ಳಬಹುದು  ಎಂಬ ಭ್ರಮೆ.

  ನಾಡಿನ ಮುಖ್ಯಮಂತ್ರಿಗಳಿಂದ ಹಿಡಿದು ಒಬ್ಬ ಜಿಲ್ಲಾಧ್ಯಕ್ಷನವರೆಗೆ ಎಲ್ಲರೂ ದೋಚುತ್ತಿದ್ದಾರೆ. ನಿನ್ನೆ ಮೊನ್ನೆ ಏನು ಇರಲಿಲ್ಲ. ಅವನು ಸಿಕ್ಕಬಟ್ಟೆ ಪ್ರಾಮಾಣಿಕ. ಆದರೆ ಈಗ ಐಷಾರಾಮಿ ಕಾರಿದೆ ಹಿಂದೆ ಮುಂದೆ ಜನರಿದ್ದಾರೆ. ಏನಿದು ಹೇಗೆ ಸಾದ್ಯ. ನಿಮ್ಮ ಬಗ್ಗೆ ಜನ ಏನು ತಿಳಿದುಕೊಳ್ಳಬಹುದು ಯೋಚಿಸಿದ್ದೀರಾ. ನೀವು ಮಾತ್ರ ಇಷ್ಟೆಲ್ಲಾ ಮಾಡಲು ರಾಜ್ಯದ ಜನರೇನು ನಿಮಗೆ ಈ ರಾಜ್ಯವನ್ನು ಮಾರಿದ್ದಾರೆ ಎಂದುಕೊಂಡಿದ್ದೀರಾ.

  ಭ್ರಷ್ಟಾಚಾರದ ಕರ್ಮಕಾಂಡದಲ್ಲಿ ಮುಳುಗಿದ್ದ ಯಡಿಯೂರಪ್ಪನವರ ಬಗ್ಗೆ ಆರೋಪಗಳು ಕೇಳಿ ಬಂದ ತಕ್ಷಣ ರಾಜಿನಾಮೆ ಕೊಟ್ಟು ಬಂದಿದ್ದರೆ ಯಡಿಯೂರಪ್ಪ ಗ್ರೇಟ್ ಆಗಿ ಬಿಡುತ್ತಿದ್ದರು. ಆದರೆ ಇಲ್ಲಿವರೆಗೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ  ಸಿ.ಎಂ. ಕುರ್ಚಿಯನ್ನು ಬಿಡದಂತೆ ಹಿಡಿದುಕೊಂಡಿರುವ ಅಥವಾ ಕಾಲು ಹಿಡಿದು ಎಳೆದರೂ ಬಿಡದಂತೆ ಅಡ್ಡ ಬಿದ್ದು ಹಿಡಿದಿರುವ ಕಾರ್ಟೂನ್ ನಿಮ್ಮ ವರ್ತನೆಗಳನ್ನು ನೂರಕ್ಕೆ ನೂರು ಬಿಂಬಿಸುತ್ತಿತ್ತು.

  ಇನ್ನೂ ಏನೇ ಮಾಡದರೂ ಈ ಹಿಂದೆ ಜನರಿಗೋಸ್ಕರವಾಗಿ ಇದ್ದ ಯಡಿಯೂರಪ್ಪ, ರೈತರಿಗಾಗಿ ಇದ್ದ ಯಡಿಯೂರಪ್ಪ, ಅವರಿಗಾಗಿಯೇ ಸೈಕಲ್ ಮೇಲೆ ಇಡೀ ಶಿಖಾರಿಪುರ ತಾಲೂಕನ್ನು ಸುತ್ತಿದ ಯಡಿಯೂರಪ್ಪ ಸತ್ತು ಹೋಗಿದ್ದಾರೆ. ಈಗೇನಿದ್ದರು ಸ್ವಜನ ಪಕ್ಷಪಾತಿ, ಅಧಿಕಾರದ ಅಮಲು ಏರಿರುವ, ಭಗಳ್ಳ ಯಡಿಯೂರಪ್ಪ ಮಾತ್ರ ಮುಖ್ಯಮಂತ್ರಿಯಾಗಿರುವುದು.

 ಕುಮಾರ ಸ್ವಾಮಿ ಬಾರಿ ಸಾಚಾ ಮನುಷ್ಯನೇ

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಏನು ಸಾಚಾ ಅಂತ ನಾನಿಲ್ಲಿ ಇಷ್ಟರವರೆಗೆ ಯಡಿಯೂರಪ್ಪನವರನ್ನು ಬೈಯಲಿಲ್ಲ. ಕಳ್ಳರ ಸಂತೆ ಅದರಲ್ಲಿ ಕುಮಾರಸ್ವಾಮಿಯದ್ದು ಒಂದು ಅಂಗಡಿ ಇದೆ. ಮಾದ್ಯಮಗಳನ್ನೇ ಖರೀಧಿ ಮಾಡಿಕೊಂಡು ಯಡಿಯೂರಪ್ಪನವರ ವಿರುದ್ದ ತಿರುಗಿಬಿದ್ದು ಬಾರಿ ಸಾಧನೆ ಮಾಡಿದಂತೆ ಪ್ರತಿ ದಿನ ಟಿ.ವಿ ಹಾಗೂ ಪತ್ರಿಕೆಗಳಲ್ಲಿ ರಾಜ್ಯದ ಉದ್ದಾರಕ್ಕಾಗಿಯೇ ಅವತಾರವೆತ್ತಿ ಬಂದವರಂತೆ ಪೋಸು ಕೊಡುತ್ತಾ ಮುಖ ಗಂಟಿಕ್ಕಿಕೊಂಡು ಮಾತನಾಡುವುದು ಹೇಸಿಗೆಯಾಗುತ್ತದೆ.

  ಯಾರೋ ಒಬ್ಬ ಪ್ರಾಮಾಣಿಕ ಯಡಿಯೂರಪ್ಪನವರ ಬಗ್ಗೆ ಇಷ್ಟೆಲ್ಲಾ ಆರೋಪಗಳನ್ನು ಮಾಡಿದ್ದರೆ ಅದನ್ನು ಒಪ್ಪಬಹುದು. ಆದರೆ, ತಾನು ಮಾಡಿರುವುದನ್ನೇ ಇನ್ನೊಬ್ಬ ಮಾಡಿದ್ದಾನೆ ಅದನ್ನೇ ನಾನು ಮಾಡಿಯೇ ಇಲ್ಲ ಎನ್ನುವಂತೆ ಮಾತಾಡಿದ ತಕ್ಷಣ ಜನ ನಂಬುತ್ತಾರೆ ಎಂದುಕೊಂಡಿದ್ದಿರಾ..

  ಜನ ಈಗಾಗಲೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಭೂ ಹಗರಣ ಬಹಳ ಹಿಂದಿನಿಂದಲೂ ಆಗಿದೆ. ಆದರೆ ಈ ತನಕ ಯಾಕೆ ಇದು ಇಷ್ಟು ಸುದ್ದಿಯಾಗಲಿಲ್ಲ. ಕುಮಾರಸ್ವಾಮಿಯವರಿಗೆ ಮಾತ್ರ ಈ ವಿಷಯ ಗೊತ್ತಾದದ್ದು ಹೇಗೆ. ಆದರೆ ಜನ ಬುದ್ದಿವಂತರು ಕಳ್ಳರ ದಾರಿ ಕಳ್ಳರಿಗೆ ಮಾತ್ರ ಗೊತ್ತಿರುತ್ತದೆ. ಯಡಿಯೂರಪ್ಪ ಇಲ್ಲಿ ಹೀಗೆ ಮಾಡಿದ್ದಾರೆ ಎಂದು ನೀವು ಮಾಡಿದ್ದಕ್ಕೆ ತಾನೇ ಗೊತ್ತಾಗಿದ್ದು.

  ಒಟ್ಟಾರೆಯಾಗಿ ರಾಜಕೀಯ ಹೊಲಸು ಎಂದು ಈಗ ಅಧಿಕೃತವಾಗಿ ಗೊತ್ತಾಗಿದೆ. ಅದಕ್ಕೆ ಜನರೆಲ್ಲಾ ಸೇರಿ ಛೀ.. ಥೂ ಎನ್ನುತ್ತಿದ್ದಾರೆ. ಅದು ನಿಮ್ಮೆಲ್ಲರ ಮುಖದ ಮೇಲಿದೆ. ಹೊರೆಸಿಕೊಳ್ಳುವ ಪ್ರಯತ್ನವನ್ನಾದರೂ ಮಾಡಿ.


{ಮನವಿ: ಈ ಬರಹದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಭ್ರಮನಿರಸನಗೊಂಡು ಬರೆದ ಬಿಸಿಯಿದೆ. ರಾಜಕಾರಣಿಗಳೆಲ್ಲರೂ ಕೆಟ್ಟವರೆಂಬುದು ನನ್ನ ವಾದವಲ್ಲ. ಹಾಗೇಯೇ ಬಿಜೆಪಿಯಲ್ಲಿ ಅತ್ಯಂತ ಪ್ರಾಮಾಣಿಕರಿದ್ದಾರೆ ಅದು ನನಗೆ ಗೊತ್ತಿದೆ. ಆದರೆ ಇಲ್ಲಿವರೆಗೆ ನಾಯಕರೆನಿಸಿಕೊಂಡವರೇ ಹೀಗೆ ಮಾಡಿದಾಗ ಪ್ರಾಮಾಣಿಕರಿಗೆ ಬೆಲೆ ಕಡಿಮೆಯಾಗುತ್ತದೆ. ಈ ಬರಹದಿಂದ ಪ್ರಾಮಾಣಿಕರಿಗೆ ಯಾವ ತಪ್ಪು ಮಾಡದವರಿಗ ನೋವಾಗುವ ಸಂದರ್ಭ ಬಂದರೆ ಅದಕ್ಕೆ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ.}

Saturday, October 2, 2010

ದೇಶದ ಜನರು ಗೆದ್ದರು, ಅಲಹಬಾದ್ ಹೈಕೋರ್ಟ್ ಕೂಡಾ ಗೆದ್ದು ಬಿಟ್ಟಿತು

ಅಲಹಬಾದ್ ಹೈಕೋರ್ಟ್ ಕೊನೆಗೂ ಗೆದ್ದು ಬಿಟ್ಟಿತು.

 ಹಿಂದು ಹಾಗೂ ಮುಸ್ಲಿಂ ಇಬ್ಬರ ನಡುವೆ ಯಾರ ಕಡೆಗೆ ಅಯೋಧ್ಯೆ ಒಲಿಯುತ್ತದೆ ಎಂಬ ಕುತೂಹಲ ಬಾಬ್ರಿ ಮಸೀದಿ ನೆಲಸಮವಾದ ದಿನದಿಂದ ಎಲ್ಲರ ತಲೆಯಲ್ಲಿ ಗಟ್ಟಿಯಾಗಿ ಕುಳಿತು ಬಿಟ್ಟಿತ್ತು.

ಆದರೆ ಆಗಿದ್ದೇ ಬೇರೆ. ಇಲ್ಲಿ ಯಾರು ಗೆಲ್ಲಲಿಲ್ಲ, ಅಲಹಬಾದ್ ಹೈಕೋರ್ಟ್ ಗೆದ್ದು ಬಿಟ್ಟಿತು. ಇಡೀ ದೇಶದ ಜನ ಈ ತೀರ್ಪನ್ನು ಮೆಚ್ಚಿದ್ದಾರೆ. ಅಯೋಧ್ಯೆಯನ್ನು ಬಹುವಾಗಿ ಅಚ್ಚಿಕೊಂಡಿದ್ದ ಜನರಲ್ಲಿ ಇತ್ತೀಚೆಗೆ ಬಂದಿದ್ದ ಭೋಪಾಲ್ ದುರಂತದ ತೀರ್ಪನ್ನು ನೋಡಿ ಎಲ್ಲೊ ಒಂದು ಕಡೆ ಆತಂಕವಿತ್ತು.

ಇದಷ್ಟೇ ಅಲ್ಲದೇ ಇಡೀ ದೇಶದಲ್ಲಿ ತೀರ್ಪು ಬಂದ ಮರು ಕ್ಷಣದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಸಾವಿರಾರು ಜನರ ಮಾರಣ ಹೋಮ ನಡೆಯುತ್ತದೆ ಎಂಬ ಭಯಂಕರವಾದ ಭಯವಿತ್ತು. ಆದರೆ ಅದೇನು ನಡೆಯಲಿಲ್ಲ. ಕೆಲವರಂತು ಇನ್ನು 15 ದಿನಗಳ ಕಾಲ ಬಂದ್ ಆಗುತ್ತದೆ ಬೈಕಿಗೆ ಪೆಟ್ರೋಲ್ ತುಂಬಿಸಿಕೊಳ್ಳಬೇಕು. ಮೊಬೈಲ್ಗೆ ಕರೆನ್ಸಿ ಹಾಕಿಸಬೇಕು ಎಂದು ಓಡಾಡಿ ಎಲ್ಲದಕ್ಕೂ ರೆಡಿಯಾಗಿದ್ದ ಘಟನೆಯನ್ನು ನೋಡಿದವರಲ್ಲು ಗಾಬರಿ ಮನೆ ಮಾಡುತ್ತಿತ್ತು.

ದೇಶದ ಜನ ಗೆದ್ದಿದ್ದಾರೆ,ತೀರ್ಪನ್ನು ಮೆಚ್ಚಿದ್ದಾರೆ. ಆದರೆ ಸುನ್ನಿ ವಕ್ಫ್ ಬೋರ್ಡ್ ಇದನ್ನು ಒಪ್ಪಿಕೊಳ್ಳಬೇಕಿತ್ತು. ಕಾರಣ ಒಂದು ಕೋರ್ಟ್ ಶ್ರೀರಾಮ ಅಯೋಧ್ಯೆಯಲ್ಲಿದ್ದಿದ್ದು ನಿಜ. ಅವನು ಅಲ್ಲಿ  ಹುಟ್ಟಿದ್ದು ನಿಜ ಎಂದು ಒಪ್ಪಿಕೊಂಡಿದೆ. ಆದರೂ ಇವರು ಮುಂದುವರೆದಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತದೆ.

ಅವರು ಮುಂದುವರೆದಿದ್ದನ್ನು ನೋಡಿ ಹಿಂದೂ ಮಹಾ ಸಭಾ ಕೂಡಾ ಈಗ ಮೂರನೇ ಒಂದು ಭಾಗ ಕೊಟ್ಟಿರುವುದನ್ನು ವಿರೋಧಿಸಿ ಸುಪ್ರೀಂ ಮೆಟ್ಟಲೇರಲು ಹೊರಟಿರುವುದು ಗಮನಿಸಬೇಕಾದ ಅಂಶ. ಇಲ್ಲಿ ಕೋರ್ಟ್ ಕೂಡಾ ದೇಶದಲ್ಲಿ ಹಿಂಸಾಚಾರ ಸಂಭವಿಸುವುದು ಬೇಡ ಮತ್ತು ಅವರಿಗೆ ಬೇಸರವಾಗುವುದು ಬೇಡ ಉದ್ದೇಶದಿಂದ ಸುನ್ನಿ ವಕ್ಫ್ ಬೋರ್ಡ್ ಗೆ ಭಾಗ ಕೊಟ್ಟಿದೆ ಎಂಬ ಮಾತುಗಳು ಜನ ಸಾಮಾನ್ಯರ ನಡುವುನಿಂದ ಕೇಳಿ ಬರುತ್ತಿವೆ.

ಕೊನೆಯದಾಗಿ ಕರುಣಾನಿಧಿ ನೆನಪಿಗೆ ಬರುತ್ತಾರೆ. ಕಾರಣ ಈ ಹಿಂದೆ ರಾಮಸೇತು ವಿವಾದವಾಗಿದ್ದಾಗ ರಾಮ ಇದ್ದಿದ್ದು ಸುಳ್ಳು, ಅವನು ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದ ಎಂಬ ಅವರಷ್ಟೇ ತೂಕದ ಪ್ರಶ್ನೆ ಎತ್ತಿದ್ದರು. ಈಗ ಅಲಹಬಾದ್ ಹೈಕೋರ್ಟ್ ಸರಿಯಾದ ಉತ್ತರ ಕೊಟ್ಟದೆ.

Tuesday, September 28, 2010

ಮಳೆ ಬಂದು ನದಿಗಳಾದ ಚರಂಡಿಗಳಲ್ಲಿ ಈಜಿದ ನೆನಪು


ಮಳೆಯ ಅಬ್ಬರಕ್ಕೆ ಮುಂದಿನ ರಸ್ತೆ ಕಾಣುತ್ತಿಲ್ಲ. ಎದುರಿನಿಂದ ಬಂದು ಕಪಾಳಕ್ಕೆ ಯಾರೋ ಒಡೆದಂತಹ ಅನುಭವ. ಚಿತ್ರದುರ್ಗದಿಂದ ಹೊಸದುರ್ಗಕ್ಕೆ ಹೋಗುವಷ್ಟರಲ್ಲಿ ಮುಖ ಕೆಂಪಾಗಾಗಿತ್ತು. ಹೊರಡುವಾಗ ಕಾಣದ ಮಳೆ ಹೋಗುವ ಮಧ್ಯೆ ಶುರು ಆಗಿಬಿಟ್ಟಿತು. ಮಳೆಯಿಂದ ತಪ್ಪಿಸಿಕೊಳ್ಳಲು ಈ ಮೊದಲಿದ್ದ ರಸ್ತೆ ಬದಿಯ ಮರಗಳು ಈಗ ಕಾಣೆಯಾಗಿವೆ.
ಒದ್ದೆಯಾಗುವುದು ಅನಿವಾರ್ಯವಾಗಿಬಿಟ್ಟಿತ್ತು. ಒಂದು ಕಡೆಯಿಂದ ಭಯ. ಎದುರಿನಿಂದ ಬಂದವನಿಗೆ ನನ್ನ ಬೈಕ್ ಕಾಣದೆ ಹೊಡೆದು ಬಿಟ್ಟರೆ ಈ ಮಳೆಯ ನೀರಿನಲ್ಲಿ ನನ್ನ ರಕ್ತವು ಕಾಣುವುದಿಲ್ಲ ಎಂಬ ಅನೇಕ ಯೋಚನೆಗಳು ಅಬ್ಬರದ ಮಳೆಯಲ್ಲೂ ನನ್ನ ತಲೆ ತುಂಬ ಗಿರಕಿ ಹೊಡೆಯುತ್ತಿದ್ದವು.
ಹೋಗುವುದು ಅನಿವಾರ್ಯವಾಗಿತ್ತು. ಏನು ಬೇಕಾದರೂ ಆಗಲಿ ಅಂದುಕೊಂಡು ಹೋಗುತ್ತಲೇ ಇದ್ದೆ. ಶಿವಗಂಗದಿಂದ ಎಡಕ್ಕೆ ತಿರುಗಿ ಹೊಸದೊಂದು ದಾರಿಯಲ್ಲಿ ಹೊಸದುರ್ಗದ ಕಡೆ ಹೊರಟೆ.
ಹೊಸದರ್ಗದವರೆಗೆ ಸಿಗುವ ಎಲ್ಲವೂ ಹಳ್ಳಿಗಳೆ. ಮಳೆ ಮತ್ತು ಹಳ್ಳಿಗಳ ಜನರು ಆ ಮಳೆಯಲ್ಲೂ ರಸ್ತೆಯಲ್ಲಿ ಏನೇನೊ ಕೆಲಸದಲ್ಲಿ ತೊಡಗಿರುವುದನ್ನು ನೋಡಿ ನೆನಪುಗಳು ಮೆರವಣಿಗೆ ಹೊರಟು ಬಿಟ್ಟವು.
ಮಳೆ ಬಂದು ನಿಂತರೆ ಸಾಕು ಊರ ಸುತ್ತಮುತ್ತಾ ಎಲ್ಲೆಲ್ಲಿ ದೊಡ್ಡ ದೊಡ್ಡ ಗುಂಡಿಗಳಿರುತ್ತವೊ ಅವೆಲ್ಲವನ್ನೂ ಒಮ್ಮೆ ಓಡೋಡಿ ನೋಡಿ ಬರಬೇಕು. ನೋಡದಿದ್ದರೆ ಏನೋ ಕಳೆದುಕೊಳ್ಳುವ ತವಕ. ಮನೆಯಲ್ಲಿ ಗೊತ್ತಾಗದ ಹಾಗೇ ಅಲ್ಲಿಯೆ ಬಟ್ಟೆ ಬಿಚ್ಚಿ ಈಜಿದ್ದು ಇದೆ. ಇನ್ನು ಮುಂದೆ ಹೋಗಿ ಮಳೆ ಬಂದು ನಿಂತ ತಕ್ಷಣ ಊರಲ್ಲಿರುವ ಚರಂಡಿಗಳು ತುಂಬಿ ಹರಿಯುವಾಗ ನದಿಗಳಂತೆ ಕಾಣುತ್ತಿದ್ದವು. ಆ ನದಿಗಳಲ್ಲಿ ಓರಗೆಯ ಹುಡುಗರೆಲ್ಲಾ ಬಿದ್ದು ಕೈ ಕಾಲು ಬಡಿದು ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಮತ್ತೆ ಬಡಿಸಿಕೊಳ್ಳುತ್ತಿದ್ದುದ್ದು ಉಂಟು.
ಅದಾಗಿ ಸ್ವಲ್ಪ ದೊಡ್ಡವರಾಗುವ ಹೊತ್ತಿಗೆ ಮನೆಯಲ್ಲಿದ್ದ ಗೋಣಿ ಚೀಲವನ್ನು ಅಜ್ಜಿಯರು ಮಾಡಿಕೊಡುವ ಕೊಪ್ಪೆ ಎಂದು ಹೇಳುವ ಅದನ್ನು ತಲೆಗೆ ಹಾಕಿಕೊಂಡು ಊರೆಲ್ಲಾ ಸುತ್ತುವುದು. ಆ ಸಂದರ್ಭಕ್ಕೆ ಊರಿನ ವಾತವರಣವೂ ಹಾಗೇ ಇತ್ತು. ಮಳೆ ನಿಂತ ತಕ್ಷಣ ದೊಡ್ಡವರೆಲ್ಲಾ ಒಂದು ಸಾರಿ ಎಲ್ಲೆಲ್ಲಿ ಏನಾಗಿದೆ ಎಲ್ಲೆಲ್ಲಿ ಮನೆ ಬಿದ್ದಿದೆ. ಯಾವ್ಯಾವ ತೋಟದಲ್ಲಿ ಮರ ಬಿದ್ದಿದೆ ಎಂದು ಸುತ್ತು ಹೊಡೆಯುತ್ತಿದ್ದರು. ಅವರ ನಹಂತರದ ತಲೆಮಾರು ನಾವೇ ಎಂಬ ಭ್ರಮೆಯಲ್ಲಿ ನಾವು ಅವರಿಂದೆ ತಿರುಗಿದ ಅನುಭವ ಮುಗಿವ ಹೊತ್ತಿಗೆ ಹೊಸದುರ್ಗ ಮುಟ್ಟಿದ್ದೆ.

Thursday, September 23, 2010

ನ್ಯಾಯಾಲಯದ ಮೇಲೆ ವಿಶ್ವಾಸ ಬರುವಂತಹ ತೀರ್ಪು ಬರಲಿ

ಬಿಸಿ ಬಿಸಿಯಾಗುತ್ತಿರುವಾಗಲೇ ತಣ್ಣಗಾಯಿತು. ಎಲ್ಲೋ ಒಂದು ಕಡೆ ಇದು ಪೂರ್ವ ನಿಯೋಜಿತವೇನೊ ಅನ್ನಿಸುವಷ್ಟರ ಮಟ್ಟಿಗೆ ಇದು ನಡೆದು ಬಿಟ್ಟಿತು. ಆತಂಕದ ಮಡುವಿನಲ್ಲಿ ಕೆಲವರು ಮುಳುಗಿ ಹೋಗಿದ್ದರೆ ಇನ್ನು ಕೆಲವರು ಏನಾಗುತ್ತದೇ ಏನೋ ಎಂಬ ತೀವ್ರ ಕುತೂಹಲದಲದಲ್ಲಿ, ತುದಿಗಾಲಲ್ಲಿ ನಿಂತಿದ್ದರು.
 ಆದರೆ ಆಗಿದ್ದೆ ಬೇರೆ. ಒಂದು ಸಲ ಯೋಚನೆ ಮಾಡಿದರೆ ಇದು ಹೀಗಾಗಿದ್ದೆ ಒಲ್ಳೆಯದಾಯಿತೇನೊ ಅನ್ನಿಸುತ್ತದೆ. ಅದರೆ ಇನ್ನೊಮ್ಮೆ ಯಾವತ್ತಿದ್ದರೂ ನಡೆಯುವುದು ನಡೆಯಲೇ ಬೇಕು ಒಂದು ಸರಿ ಏನಾದರೂ ಒಂದು ಆಗಿಬಿಟ್ಟರೆ ಸಾಕು ಎಂಬ ಹಂಬಲ ಅನೇಕರದ್ದು.
ಅಯೋಧ್ಯೆಯ ರಾಮ ಜನ್ಮಭೂಮಿ ಹಿಂದುಗಳಿಗೆ ಸೇರಿದ್ದು ಆದ್ದರಿಂದ ಅದು ಹಿಂದುಗಳ ಪರವಾಗಿಯೇ ಇರಬೇಕು ಕೋರ್ಟ್ ತೀರ್ಪು ಹಿಂದುಗಳ ಪರವಾಗಿಯೇ ಇದೆ ಎಂಬ ಬಲವಾದ ನಂಬಿಕೆ ಹಿಂದುಗಳದ್ದಾದರೆ ಮುಸಲ್ಮಾನರು ಅಲ್ಲಿ ಬಾಬರ್ ಕಟ್ಟಿದ ಮಸೀದಿಯಿತ್ತು ಆದ್ದರಿಂದ ಅದು ನಮಗೆ ಸೇರಬೇಕು ಎಂದು ಎರಡು ಕಡೆಗಳಲ್ಲಿ ಬೆಟ್ಟಿಂಗ್ ಕೂಡಾ ನಡೆಯುತ್ತಿದ್ವು. ಆದರೆ ಇದೆಲ್ಲದಕ್ಕು ಒಮ್ಮೆ ತಣ್ಣೀರು ಬಿದ್ದಿದ್ದು ತೀರ್ಪು ಮುಂದೆ ಹೋದಾಗ.
ಕೆಲವು ನಗರಗಳಂತು ಬೂದಿ ಮುಚ್ಚಿದ ಕೆಂಡದಂತಿದ್ದವು. ಈಗಾಗಲೇ ಎರಡು ಕಡೆಗಳಲ್ಲಿ ಗಲಭೆಗೆ ಸಜ್ಜಾದ ಉದಾಹರಣೆಗಳು ಅಲ್ಲಲ್ಲಿ ಗುಸುಗುಸುಗಳಿಂದ ಕೇಳಿ ಬರುತ್ತಿದ್ದವು.
ತೀರ್ಪು ಯಾರ ಕಡೆಗೆ ಬೇಕಾದರೂ ಬರಲಿ ಗಲಾಟೆ ನಡೆಯುವುದು ನಿಶ್ಚಿತ ಎಂದು ಅನೇಕರ ವಾದ. ಇದನ್ನು ಕೇಳಿಸಿಕೊಂಡ ಹಿಂದು ಮುಸ್ಲೀಂ ಮಹಿಳೆಯರು ನಗರಗಳಿಂದ ಹಳ್ಳಿಗಳ ಕಡೆ ವಲಸೆಯನ್ನು ಹೋಗಿದ್ದರು.
ಆದರೆ ಈ ಕೋಟೆಯ ಆಶಯ ತೀರ್ಪು ಬರಲಿ ಅದನ್ನು ಎಲ್ಲರು ಒಪ್ಪಿಕೊಳ್ಳಲಿ ಹಾಗೂ ಭೋಪಾಲ್ ದುರಂತದಂತ ತೀರ್ಪು ಬರದೇ ಸತ್ಯ ನ್ಯಾಯ ಎತ್ತಿ ಹಿಡಿದು ಜನರಿಗೆ ನ್ಯಾಯಾಲಯದ ಮೇಲೆ ವಿಶ್ವಾಸ ಬರುವಂತಹ ತೀರ್ಪು ಬರಲಿ.

Tuesday, September 14, 2010

ಮೈಸೂರಿನ ಬ್ರಾಹ್ಮಣ ಕೇರಿಗಳಲ್ಲಿ ಪಾದಯಾತ್ರೆ ಹೊರಟ ಸ್ವಾಮೀಜಿಯ ಜೊತೆ ಒಂದು ಸಂವಾದ

J®èªÀ£ÀÄß ¸Àj ªÀiÁqÀ®Ä £À¤ßAzÀ DUÀĪÀÅ¢®è
 zÀÄUÀðzÀ ªÀÄÄgÀÄWÁ ªÀÄoÀzÀ ²ªÀªÀÄÆwð ±ÀgÀtjAzÀ ¢ÃPÉë ¥ÀqÉzÀÄ FUÀ zÀ°vÀ ¸ÀªÀiÁdªÀ£ÀÄß ¥Àæw¤¢ü¹ UÀÄgÀÄUÀ¼ÁVgÀĪÀ §¸ÀªÀ ªÀÄÆwð ªÀiÁzÁgÀ ZÉ£ÀßAiÀÄå ¸Áé«ÄÃf ¨ÁæºÀät PÉÃjUÀ¼À°è ¥ÁzÁAiÀiÁvÉæ ªÀiÁqÀĪÀÅzÁV ºÉý ºÉƸÀ ºÉeÉÓ¬ÄqÀ®Ä ªÀÄÄAzÁVgÀĪÀ ¸ÀAzÀ¨sÀðzÀ°è CªÀgÀ MAzÀÄ ¸ÀAzÀ±Àð£À.
¥Àæ±Éß: E°èªÀgÉUÉ ¨ÁæºÀät ¸Áé«ÄÃfUÀ¼ÀÄ zÀ°vÀ PÉÃjUÀ¼À°è ¥ÁzÀAiÀiÁvÀæ, G¥À£Áå¸À EvÁå¢ ªÀiÁrzÁÝgÉ. DzÀgÉ FUÀ ¤ÃªÀÅ ¨ÁæºÀät PÉÃjUÀ¼À°è ¥ÁzÀAiÀiÁvÉæ ªÀiÁqÀĪÀ ºÉƸÀ ºÉeÉÓ EnÖ¢ÝÃj EzÀjAzÀ ¸ÀªÀĸÉå ¸ÀjAiÀiÁUÀ§ºÀÄzÉÃ?
¸Áé«ÄÃf: J®èªÀ£ÀÆß ¸Àj ªÀiÁqÀ®Ä DUÀĪÀÅ¢®è JA§ÄzÀÄ £À£Àß UÀªÀÄ£ÀzÀ°èzÉ. £Á¤ÃUÀ ¨ÁæºÀät PÉÃjUÀ¼À°è ¥ÁzÀAiÀiÁvÉæ ªÀiÁqÀÄwÛzÉÝÃ£É JAzÀgÉ zÀ°vÀgɯÁè ¸Àj¬ÄzÁÝgÉ JAzÀxÀðªÀ®è, £ÀªÀÄä®Æè ¸ÁPÀµÀÄÖ §zÀ¯ÁªÀuÉUÀ¼ÁUÀ¨ÉÃQzÉ. zÀ°vÀgÀÄ °AUÁ¬ÄvÀgÀ ºÁUÀÆ EvÀgÀgÀ ªÀÄ£ÉUÀ½UÉ PÀgÉzÀgÀÆ ºÉÆÃUÀÄwÛ®è. CªÀgÀ°ègÀĪÀ ªÀÄÆqsÀ £ÀA©PÉAiÉÄà EzÀPÉÌ PÁgÀt PÀæªÉÄÃt EzÀ£ÀÄß ¸Àj ªÀiÁqÀĪÀ ¥ÀæAiÀÄvÀß EzÉ.
¥Àæ : ºÁVzÀÝgÉ ¤ªÀÄä F ¥ÁzÀAiÀiÁvÉæAiÀÄ GzÉÝñÀªÉãÀÄ?
¸Áé«ÄÃf: EzÀjAzÀ £ÀªÀÄäªÀgÀÄ §zÀ¯ÁUÀ¨ÉÃPÀÄ. ºÁUÀÆ ªÀÄ£À¸ÀÄìUÀ¼ÀÄ ºÀwÛgÀªÁUÀ¨ÉÃPÀÄ. FUÀ PÁ® §zÀ¯ÁVzÉ. ¨ÁæºÀätgÀÄ ºÁUÀÆ zÀ°vÀgÀ®Æè C£ÉÃPÀ §zÀ¯ÁªÀuÉUÀ¼ÁVªÉ.
¥Àæ: C¸Ààø±ÀåvÀ JA§ÄzÀÄ §ÈºÀzÁPÁgÀªÁV ¨É¼ÉzÀÄ ¤AwgÀĪÀ zÉÆqÀØ ªÀÄgÀ, EzÀ£ÀÄß ¥ÁzÀAiÀiÁvÀæ¬ÄAzÀ §ÄqÀ ¸ÀªÉÄÃvÀ QvÀÄÛ ºÁPÀ®Ä ¸ÁzsÀåªÉ?
¸Áé«ÄÃf: FUÁUÀ¯Éà ¸ÁPÀµÀÄÖ §zÀ¯ÁªÀuÉ DVzÉ. DzÀgÉ EzÀÄ £ÀÆgÁgÀÄ ªÀµÀðUÀ¼À EwºÀUÁ¸À«gÀĪÀÉAiÀÄ ¸ÀªÀĸÉå. FUÀvÁ£É PÁAiÀÄðªÀ£ÀÄß PÉÊUÉÆArzÉÝªÉ ªÀÄÄAzÉ K£ÁUÀÄvÉÆÛà PÁzÀÄ £ÉÆÃqÉÆÃt.
¥Àæ: ¥ÉÃeÁªÀgÀ ²æÃUÀ¼ÀÄ F ¥ÁzÀAiÀiÁvÉæ ºÁUÀÆ zÀ°vÀ PÉÃjUÀ½UÉ ºÉÆÃV ¤ÃªÀÅ £ÀªÀÄäªÀgÉà JAzÀÄ ºÉüÀĪÀ ºÁUÀÆ CªÀgÀ°è zÉÊAiÀÄð vÀÄA§ÄªÀ PÁAiÀÄðªÀ£ÀÄß ¸ÀĪÀiÁgÀÄ 30-40 ªÀµÀðUÀ½AzÀ ªÀiÁqÀÄwÛzÁÝgÉ. DzÀgÉ ¤ÃªÀÅ EzÀÝQÌzÀݺÁUÉ F ¤zsÁðgÀ PÉÊUÉƼÀî®Ä PÁgÀt?
¸Áé«ÄÃf: CªÀgÀÄ £ÀªÀÄä PÉÃjUÉ §A¢zÁÝgÉ. £ÁªÀÅ CªÀgÀ PÉÃjUÉ ºÉÆÃUÀÄvÉÛêÉ. EµÀÄÖ ªÀµÀð £ÁªÀÅ zÀÆgÀ E¢é. ºÁUÀÆ £ÀªÀÄUÉ EzÉ®èªÀÅ CxÀðªÁUÀÄwÛgÀ°®è. £ÁªÀÅ PÀæªÉÄÃt ¨É¼ÉzÀÄ ¥Àæ§ÄzÀÞªÀiÁ£ÀPÉÌ §AzÀ ªÉÄïÉqÀ UÉÆvÁÛVzÉ, CzÀPÁÌV FUÀ ¥ÁzÀAiÀiÁvÉæ ªÀiÁqÀÄwÛzÉêÉ.
¥Àæ: F ¤zsÁðgÀ PÉÊUÉƼÀî®Ä ¤ªÀÄUÉ ¥ÉæÃgÀuÉ J°èAzÀ?
¸Áé«ÄÃf: zÀ°vÀgÀ PÁ¯ÉÆäUÀ¼À°è ¥ÉÃeÁªÀgÀ ²æÃUÀ¼ÀÄ ºÉÆÃUÀĪÁUÀ £ÀªÀÄäªÀgÀÄ C¨sÀÆvÀ¥ÀƪÀð ¸ÁéUÀvÀ, ¥ÁzÀAiÀiÁvÉæ ªÀiÁrzÀÝ£ÀÄß ªÀiÁzÀåªÀÄUÀ¼À°è £ÁªÀÅ £ÉÆÃrzÉÝêÉ. ²æÃUÀ¼ÀÄ £ÁªÀÅ ¤ªÉÆäA¢VzÉÝÃªÉ JAzÀÄ ºÉüÀÄwÛzÁÝgÉ. F PÁAiÀÄð JgÀqÀÄ PÀqɬÄAzÀ DzÀgÉ M¼ÉîzÀÄ CAvÀ £À£ÀUÉ C¤ß¹vÀÄ. ºÁUÉà ¥ÉÃeÁªÀgÀ ²æÃUÀ¼ÀÄ £ÀªÉÆäA¢VzÁÝgÉ DzÀgÉ, CªÀgÀ »A¨Á®PÀgÀÄ ºÉÃVzÁÝgÉ £ÉÆÃqÀ¨ÉÃPÀÄ JAzÀÄ £Á£ÀÄ F AiÀiÁvÉæ PÉÊUÉÆArzÉãÉ. E°è £À£ÀUÉ ¸ÁéUÀvÀ ªÀiÁrzÀgÀÆ ¸ÀAvÉÆõÀ, ªÀiÁqÀ¢zÀÝgÉ ¨ÉøÀgÀ«®è.
¥Àæ: ¥ÁzÀAiÀiÁvÉæ £ÀAvÀgÀ K£ÀÄ?
¸Áé«ÄÃf: ¥ÁzÀAiÀiÁvÉæUÉ ºÉÆgÀngÀĪÀ £À£ÀߣÀÄß ¸ÁéUÀw¸À®Ä ªÉÄʸÀÆj£À°ègÀĪÀ ¨ÁæºÀät ªÀĺÁ¸À¨sÁ ªÀÄÄAzÁVzÉ. CªÀgÀÄ £ÀªÀÄä£ÀÄß ¸ÁéUÀw¸ÀÄwÛgÀĪÀÅzÀÄ zÉÆqÀØ ¨É¼ÀªÀtÂUÉ. ¨ÁæºÀätgÀ®Æè ¸ÁPÀµÀÄÖ d£À F ¨É¼ÀªÀtÂUÉUÁV PÁAiÀÄÄwÛzÁÝgÉ. F ¥ÁzÀAiÀiÁvÉæAiÀÄ £ÀAvÀgÀzÀ ¸ÀàAzsÀ£É, ¥ÀæwQæAiÉÄ J®èªÀ£ÀÆß £ÉÆÃr ªÀÄÄA¢£À zÁjAiÀÄ£ÀÄß AiÉÆÃa¸ÀÄvÉÛãÉ. DzÀgÉ EzÀÄ AiÀıÀ¹éAiÀiÁzÀgÉ PÀæªÉÄÃt ¥ÉÃeÁªÀgÀ ²æÃUÀ½UÉ £À£Àß ¨ÉA§® ¸ÀÆa¹ CªÀgÉÆA¢UÉ PÉÊeÉÆÃr¸ÀÄvÉÛãÉ.
¥Àæ: F ¤ªÀÄä ºÉƸÀ ºÉeÉÓUÉ zÀ°vÀ ¸ÀªÀiÁd AiÀiÁªÀ C©ü¥ÁæAiÀÄ ªÀåPÀÛ¥Àr¹zÉ?
¸Áé«ÄÃf: J®ègÀÆ M¼ÉîAiÀÄ ªÀÄ£À¹ì¤AzÀ M¦àzÁÝgÉ. zÀ°vÀ ¸ÀªÀiÁdzÀ C£ÉÃPÀ ªÀÄÄRAqÀgÀÄ £À£Àß eÉÆvÉ £ÁrzÀÄÝ §gÀÄwÛzÁÝgÉ.C£ÉÃPÀ d£À G¥À£Áå¸ÀPÀgÀÄ, ¸Á»wUÀ¼ÀÄ PÀÆqÁ §gÀÄwÛzÁÝgÉ. £ÀªÀÄä d£À zÀqÀØgÀÄ, ªÀÄÄUÀÝgÀÄ, DzÀgÀÆ ¸Áé«ÄÃfUÉ M¼ÉîAiÀÄ ¸ÁéUÀvÀ ªÀiÁrzÁÝgÉ. FUÀ £ÁªÀÅ ¤ªÀÄä PÉÃjUÉ §gÀÄwÛzÉÝêÉ. ¤ÃªÀÅ «zÁåªÀAvÀgÀÄ ¸ÀĸÀA¸ÀÌøvÀgÀÄ ºÉÃUÉ ¸ÁéUÀw¸ÀÄwÛÃj JA§ÄzÀ£ÀÄß £ÉÆÃqÀ¨ÉÃPÀÄ JA§ D±ÀAiÀÄ«zÉ.
¥Àæ: ¤ÃªÀÅ ¥ÁzÀAiÀiÁvÉæ ªÀiÁqÀĪÀ ¤zsÁðgÀ ¥ÀæPÀn¹zÀ £ÀAvÀgÀ ¥ÀæwPÀæAiÉÄUÀ¼ÀÄ ºÉÃVªÉ?
¸Áé«ÄÃf: zɺÀ°, ªÀÄÄA¨ÉÊ, ¥ÀÆ£Á »ÃUÉ C£ÉÃPÀ PÀqÉUÀ½AzÀ ¤gÀAvÀgÀªÁV zÀÆgÀªÁt PÀgÉUÀ¼ÀÄ. ¸ÀAzÉñÀUÀ¼ÀÄ ªÁå¥ÀPÀªÁV ºÀjzÀÄ §gÀÄwÛªÉ. ¸ÁPÀµÀÄÖ ¥ÀÆgÀPÀªÁzÀ ªÁvÀªÀgÀt ¤ªÀiÁðtªÁVzÉ. F PÁAiÀÄð JAzÉÆà DUÀ¨ÉÃQvÀÄÛ FUÀ ¤ªÀÄäAzÀ DUÀÄwÛzÉ JAzÀÄ C£ÉÃPÀ d£À C©üªÀiÁ£À ªÀåPÀÛ¥Àr¸ÀÄwÛzÁÝgÉ.
¥Àæ: FUÀ J®èzÀPÀÆÌ ¨ÁæºÀät ¸ÀªÀiÁdªÀ£Éßà vÉÆÃj¸ÀĪÀ ¥ÀæªÀÈwÛ §AzÀÄ ©lÖzÉ. DzÀgÉ EwÛÃa£À ¨É¼ÀªÀtÂUÉUÀ¼À£ÀÄß £ÉÆÃrzÁUÀ zÀ°vÀgÀ ªÉÄÃ¯É ¨ÁæºÀäuÉÃvÀgÀgÉà ºÉZÁÑV zËdð£Àå ªÀiÁqÀÄwÛzÁÝgÉ EzÀ£ÀÄß M¦àPÉƼÀÄîwÛÃgÁ?
¸Áé«ÄÃf: RArvÁ F ªÀiÁvÀ£ÀÄß ºÀ¯ÉèUÀ¼ÉAiÀÄĪÀAw®è. PÀæªÉÄÃt EzÉ®èªÀÇ ¸ÀjAiÀiÁUÀ¨ÉÃPÉA§ÄzÀÄ £ÀªÀÄä D¸É. CzÀPÉÌ ¥ÀÆgÀPÀªÁzÀ PÉ®¸À ªÀiÁqÀÄvÀwzÉÝêÉ.
¥Àæ: ¸ÁªÀiÁ£ÀåªÁV zÀ°vÀgÀ¯Éèà JqÀ, §® JA§ UÀÄA¥ÀÄUÀ½ªÉ, CªÀgÀ¯Éèà ºÉÆAzÁtÂPɬĮè JA§ DgÉÆÃ¥ÀUÀ¼ÀÄ PÉý §gÀÄwÛªÉ EzÀPÉÌ K£ÀÄ ªÀiÁqÀÄwÛÃj?
¸Áé«ÄÃf: ºËzÀÄ F jÃwAiÀÄ ¨sÉÃzÀ ¨ÁªÀUÀ¼ÀÄ zÀ°vÀgÀ M¼ÀVªÉ. EzÀ£ÀÄß vÉÆqÉAiÀÄĪÀ ¸À®ÄªÁV EwÛÃZÉUÉ ¨ÉAUÀ¼ÀÆj£À CA¨ÉÃqÀÌgï ¨sÀªÀ£ÀzÀ°è JgÀqÀÄ UÀÄA¥ÀÄUÀ¼À£ÀÄß ¸ÉÃj¹ PÁAiÀÄðPÀæªÀÄ ªÀiÁrzÉÝêÉ. EzÀ£ÀÄß ªÀÄÄA¢£À ¢£ÀUÀ¼À°è ¸Àj ªÀiÁqÀÄvÉÛêÉ.


Sunday, September 12, 2010

ಕ್ಷಮಿಸು ಅಂಥ ಕಾಲು ಹಿಡಿಯುವ ಕ್ಷಣದ ಮಾತಿನ ಒಂದು ಚರ್ಚೆ...

ಕಾಲು ಹಿಡಿತೇನೆ, ಪ್ಲೀಸ್ ನನ್ನ ಕ್ಷಮಿಸು ಅಂತ ಕೇಳುವುದು ಹಾಗೂ ಕಾಲು ಹಿಡಿದೇ ಬಿಡುವುದು. ಈ ಎರಡರ ವ್ಯತ್ಯಾಸಗಳೇನು ಎನ್ನುವ ಬಗ್ಗೆ ನನ್ನ ಸ್ನೇಹಿತ ಹಾಗೂ ನಾನು ಇತ್ತಿಚೆಗೆ ಬಾರಿ ಚರ್ಚೆಯನ್ನೇ ನಡೆಸಿದೆವು.
ಅವನು ಪ್ರೀತಿಸುವವಳ ಜೊತೆ ಏನೋ ತಪ್ಪಾಗಿ ನಡೆದುಕೊಂಡುಬಿಟ್ಟಿದ್ದನಂತೆ. ಅದಕ್ಕಾಗಿ ಅವಳು ನೀನು ಇಂಥವನು ಅಂತ ಗೊತ್ತಿರಲಿಲ್ಲ, ನಿನಗೂ ನಿನ್ನ ಪ್ರೀತಿಗೂ ಗುಡ್ ಬೈ, ಇನ್ನೂ ನಾನು ನಿನ್ನ ಲವ್ವರ್ ಅಲ್ಲ ಒಂದೇ ಕ್ಷಣದಲ್ಲಿ ಎಲ್ಲವನ್ನು ಬಿಸಾಡಿದಳು.ಇವನಿಗೆ ಏನು ತೋಚದಂತಾಗಿ ಇಲ್ಲ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಕ್ಷಮಿಸು ಎಂದು ಗೋಗರೆದಿದ್ದಾನೆ. ಆದರೂ ಪ್ರಯೋಜನವಾಗಿಲ್ಲ.ನಂತರ ನಿನ್ನ ಕಾಲು ಹಿಡಿತೇನೆ ನನ್ನ ಕ್ಷಮಿಸು ಎಂದಿದ್ದಾನೆ. ಹೀಗೆ ಏನೇನೊ ಮಾತುಕತೆಯಾಗಿ ಕೊನೆಗೆ ಕ್ಷಮಿಸಿದ್ದಾಳೆ. ಅವರ ಪ್ರೀತಿ ಮತ್ತೊಮ್ಮೆ ಅಮರವಾಗಿದೆ.
ಆನಂತರ ಅವನು ನನ್ನ ಬಳಿ ಬಂದ. ನಡೆದದ್ದೆಲ್ಲವನ್ನು ಹೇಳಿದ, ನಾನು ಕೇಳಿಸಿಕೊಂಡೆ. ಆದರೆ ನಿನ್ನ ಲವ್ವರ್ ಜೊತೆ ನೀನು ಕಾಲು ಹಿಡಿಯುವ ಮಾತು ಆಡಬಾರದಿತ್ತು. ನೀವಿಬ್ಬರು ಪರಸ್ಪರ ಅರ್ಥ ಮಾಡಿಕೊಂಡಿರಬೇಕು ಆದರೆ ಪ್ರೀತಿಯ ಮದ್ಯದಲ್ಲಿ ಇಂಥಹ ಕ್ಷಮೆಗಳು ಮತ್ತು ಕಾಲು ಹಿಡಿಯುವ ಪ್ರಸಂಗಗಳು ಬರಬಾರದಿತ್ತು ಎಂದೆ. ಅವನು ಬಹಳ ನೊಂದುಕೊಂಡ.
ಇಲ್ಲ ನಾನು ಯೋಚಿಸದೇ ಮಾತಾಡಿ ಅವಳಿಗೆ ತುಂಬ ನೋವುಇ ಕೊಟ್ಟಿದ್ದೆ. ಅವಳ ಜಾಗದಲ್ಲಿ ನಿಂತು ನಾನು ಯೋಚನೆ ಮಾಡಿದಾಗ ನಾನು ಮಾಡಿದ್ದು ತಪ್ಪು ಅಂತ ಗೊತ್ತಾಯಿತು. ಈ ಸಂದರ್ಭದಲ್ಲಿ ನಾನು ನನ್ನ ಮನದರಸಿಯ ಕಾಲು ಹಿಡಿಯುತ್ತೇನೆ ಅಂದರೆ ತಪ್ಪೇನು ಅನ್ನಿಸಿತು. ಆದರೆ ಹಿಡಿಯಲಿಲ್ಲ ಹಾಗೇ ಹೇಳಿದೆ ಅಷ್ಟೆ ಅಂದ. ಮನದರಸಿ ಹೌದು. ನೀನು ಹೇಳುವುದೆಲ್ಲ ಸರಿಯಿದೆ ಆದರೆ ಕಾಲು ಹಿಡಿಯುತ್ತೇನೆ ಎಂದು ಹೇಳುವುದು ಹಾಗೂ ಹಿಡಿಯುವುದೆ ಇವೆರಡರ ನಡುವಿನ ವ್ಯತ್ಯಾಸವೇನು ಎಂದು ಕೇಳಿದೆ.ಅವಳು ನನ್ನ ಬಗ್ಗೆ ಅಷ್ಟು ಬೇಸರಾವಾಗಿದ್ದಾಗ ಇದೊಂದು ಮಾತಿನಿಂದ ಬದಲಾಗುತ್ತಾಳೆ. ನನ್ನವನು ನನ್ನ ಕಾಲು ಹಿಡಿಯುವ ಸ್ಥಿತಿ ಬರಬಾರದು ಎಂದು ಅವಳು ಕ್ಷಮಿಸುತ್ತಾಳೆ ಆಗ ನಮ್ಮಿಬ್ಬರ ಮನಸ್ಥಿತಿ ಸರಿಯಾಗುತ್ತೆ ಅಂತ ಅವನದೇ ಲಾಜಿಕ್ ಗಳನ್ನು ಹೇಳಿದ. ಅವನ ಪ್ರೀತಿಯ ವಿಚಾರದಲ್ಲಿ ಇದು ಸರಿ. ಯಾಕೆಂದರೆ ಇಲ್ಲಿ ಭಾವನೆಗಳೆ ಆಟವಾಡುವುದು. ಆದರೆ ಹೇಳುವುದು ಮಾಡುವುದು ಈಓ ಎರಡು ಕೆಲಸಗಳು ಕೆಲವು ಶಬ್ದ ಬಳಕೆಗಳಲ್ಲಿ ವ್ಯತ್ಯಾಸವಾಗುವುದು ನನಗೆ ಕುತೂಹಲಕಾರಿಯಾದ ವಷಯವಾಯಿತು.
ಬಾರಿ ಘನತೆಯೊಂದಿಗೆ ಬಾಳಿದ ವ್ಯಕ್ತಿಯೊಬ್ಬ ಅಥವಾ ಸ್ವಾಭಿಮಾನಿಯಾಗಿದ್ದ ವ್ಯಕ್ತಿಯೊಬ್ಬ ಹೀಗೆ ಹೇಳಿದ ಮೇಲೆ ಅವನು ಕಾಲು ಹಿಡಿದರೂ ಹೇಳಿದರೂ ಒಂದೇ. ಅವನು ತನ್ನ ಮನಸ್ಸಿನಲ್ಲಿ ತಾನಾಗೇ ಬಾವಿಸುತ್ತಾನೆ. ಛೇ ನಾನು ಇಂಥಹ ತಪ್ಪುಮಾಡಿದೆ ಅಥವಾ ನಾನು ಕಾಳು ಹಿಡಿಯುವ ಕೆಲಸ ಮಾಡಿದೆ ಎಂದು ಪ್ರತಿ ಕ್ಷಣ ತನ್ನನ್ನು ತಾನು ಶಪಿಸಿಕೊಳ್ಳುತ್ತಾನೆ. ಈಗ ನೀನು ಸ್ವಾಭೀಮಾನಿಯಾಗಿದ್ದರೆ ನೀನು ಅವಳ ಕಾಲು ಹಿಡಿದಂತೆಯೆ ಎಂದು ಭಾವಿಸು ಅಂತ ನಾನು ಹೇಳಿದೆ. ಅವನು ಮೌನವಾದ ನಂತರ ಹೌದು ನಾನು ಕಾಲು ಹಿಡಿದೆ ಎಂದ. ಏನೇ ಆಗಲಿ ಪ್ರೇಮಿಗಳ ವಿಷಯವನ್ನಿಟ್ಟುಕೊಂಡು ನನ್ನ ವ್ಲಾಗಿನಲ್ಲಿ ಚರ್ಚೆ ಮಾಡಿದರೆ ಅವನ ಪ್ರೀತಿಯ ಹುಡುಗಿಗೂ ನನ್ನ ಮೇಲೆ ಕೋಪ ಬಂದು ಕಾಲು ಹಿಡಿ ಎಂದರೆ ಕಷ್ಟ. ಆ ಹುಡುಗಿಗೂ ಈ ಹುಡುಗನಿಗೂ ಒಳ್ಳೆದಾಗಲಿ ಎಂದು ಕನಸಿನ ಕೋಟೆಯಲ್ಲಿ ಹಾರೈತ್ತೇನೆ.

Wednesday, September 8, 2010

ಈ ಹುಡುಗಿಯ ಲೇಖನಿಯ ಪ್ರಯತ್ನವನ್ನು ಮೆಚ್ಚಲೇಬೇಕು

ಲೇಖನಿ, ಇದು ಖಡ್ಗವಲ್ಲ.
ಇದು ಲೇಖನಿ ಕೈ ಬರಹದ ಒಂದು ಪುಟ್ಟ ಪತ್ರಿಕೆ. ಮೂಡಬಿದರೆ ಬಳಿಯ ನೆಲ್ಲಿಜೆಯ ನವ್ಯಜ್ಯೋತಿ ಎಂಬ ಹುಡುಗಿಯೊಬ್ಬಳು ಮಾಡುತ್ತಿರುವ ಈ ಪ್ರಯತ್ನಕ್ಕೆ ಭೇಷ್ ಎನ್ನಲೇಬೇಕು. ಪ್ರಬುದ್ಧವಾದ ಬರಹಗಳನ್ನೇನು ಹೊತ್ತು ತರದ ಆದರೆ ಬರೆಯಬೇಕೆಂಬ ಹಂಬಲದಲ್ಲಿ ಮೂಡಿ ಬರುತ್ತಿರುವ ಪತ್ರಿಕೆ.
ಕೈ ಬರಹದಲ್ಲಿ ಹಾಗೂ ಅಂಧವಾದ ಬರಹದ ಪತ್ರಿಕೆ ಲೇಖನಿ ನವ್ಯಾಳ ಆಸಕ್ತಯನ್ನು ತೋರಿಸುತ್ತದೆ. ಇಂದು ಸರ್ಕಾರ ಕೊಡುವ ಜಾಹಿರಾತುಗಳನ್ನೆ ನಂಬಿಕೊಂಡು ಅಥವಾ ಸರ್ಕಾರದ ಜಾಹೀರಾತುಗಳಿಗಾಗಿಯೇ ಮುದ್ರಿಸುವ ಸಣ್ಣ ಪತ್ರಿಕೆಗಳನ್ನು ನೋಡಿದ್ದೇನೆ. ಸರಕಾರ ಜಾಹೀರಾತು ನೀಡುವ ದಿನ ಪತ್ರಿಕೆಯನ್ನು ಮುದ್ರಿಸಿ ಜಾಹೀರಾತಿನ ಹಣ ಹೊಡೆಯುವ ಈ ಕಾಲಘಟ್ಟದಲ್ಲಿ. ಪತ್ರಿಕೆಗಳು ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳುತ್ತಿರುವ ಸಂದರ್ಭದಲ್ಲಿ ಲೇಖನಿ ವಿಶಿಷ್ಠವಾಗಿ ಕಾಣುತ್ತದೆ.
ಕಾಲೇಜಿನಲ್ಲಿ ಮಾದ್ಯಮ ಇತ್ತು. ಆದರೆ ಸೌಲಭ್ಯಗಳ ಕೊರತೆಯಿಂದಾಗಿ ಅದು ಸರಿಯಾದ ಸಮಯಕ್ಕೆ ಅದು ಮುದ್ರಣವಾಗುತ್ತಿರಲಿಲ್ಲ. ಇದೇ ಕಾರಣದಿಂದ ನಾನು ಲೇಖನಿಯನ್ನು ಕೈಬರಹದಲ್ಲಿ ಮಾಡಿ ಸರಿಯಾದ ಸಮಯಕ್ಕೆ ತರಬೇಕೆಂದು ಯೋಚಿಸುತ್ತದ್ದೆ. ಅದೇ ಸಮಯಕ್ಕೆ ಮೌಲ್ಯ ಮೇಡಮ್ ಕೈ ಬರಹದ ಪತ್ರಿಕೆಯೊಂದನ್ನು ತೋರಿಸಿ ನೀವು ಯಾಕೆ ಮಾಡಬಾರದು ಎಂಬ ಪ್ರಶ್ನೆಯನ್ನಿಟ್ಟಿದ್ದರು. ಇದೇ ನನಗೇ ಸ್ಪೂರ್ತಿಯಾಯಿತು.ಪತ್ರಿಕೆಯನ್ನು ಮುಂದೆಯು ಮಾಡುವಾಸೆ ಇದೆ. ಆದರೆ ಆರ್ಥಿಕವಾಗಿ ಸಹಕಾರ ಬೇಕು ಎನ್ನುತ್ತಾಳೆ ನವ್ಯಾ. ಈಗ ಪ್ರತಿ ಸಂಚಿಕೆಗೆ 500 ಕ್ಕಿಂತ ಹೆಚ್ಚು ಹಣ ಖರ್ಚಾಗುತ್ತಿದೆ.
ಸಾಕಷ್ಟು ಹೆಸರು ಮಾಡಿದ ದೊಡ್ಡ ಬರಹಗಾರರು ಕೂಡಾ ಇಂದು ದುಡ್ಡಿನ ದಾಸರಾಗಿದ್ದಾರೆ. ಯಾರು ಕೂಡಾ ಪತ್ರಿಕಾ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಬರಹದಲ್ಲಿ ಪತ್ರಿಕಾ ಧರ್ಮ ಪಾಲಿಸಿ ಅದಕ್ಕಾಗಿ ಮಣ್ಣಾದವರ ಬಗ್ಗೆ ಕಂತು ಕಂತು ಬರೆದು ಹಣ ಮಾಡಿಕೊಳ್ಳುತ್ತಾರೆಯೆ ಹೊರತು ಯಾರಿಗೂ ಆ ಬಗ್ಗೆ ಚಿಂತೆಯಿಲ್ಲ.
ಒಟ್ಟಾರೆ ಪತ್ರಿಕೋದ್ಯಮ ಹಳ್ಳ ಹಿಡಿಯುತ್ತಿರುವ ಸಂದರ್ಭದಲ್ಲಿ ನವ್ಯಾಳ ಆಸಕ್ತಿ ಹಾಗೂ ಪ್ರಯತ್ನ ಕನಸಿನ ಕೋಟೆಯದೊಂದು ಸಲಾಮ್.
ಲೇಖನಿಯ ಇ-ಮೇಲ್ ವಿಳಾಸ: lekhaniweekly@gmail.com

Saturday, September 4, 2010

ಹೊಸ ಬ್ಲಾಗಿ ಹೊಸ ಬರಹ.

ಕಾಲೇಜು ಮುಗಿಯಿತು. ಈಗ ಜೀವನ. ಬದುಕು ಅನಿವಾರ್ಯ ಅದೇ ಕಾರಣಕ್ಕೆ ಜೀವನ. ಈಗ ಎಲ್ಲವೂ ನೆನಪು ಮಾತ್ರ. ಉಜಿರೆ ಕಾಲೇಜು ತುಂಬಾ ನೆನಪಾಗುತ್ತದೆ. ಕಾಲೇಜಿನಲ್ಲಿದ್ದಾಗ ಎಲ್ಲರಂತೆ ಎಷ್ಟು ಬೇಗ ಮುಗಿಯುತ್ತದೋ ಎಂಬ ತಳಮಳಗಳು ಈಗ ಮುಗಿಯಿತಲ್ಲ ಎಂಬ ತಳಮಳ.


ಉಜಿರೆ ಕಾಲೇಜು
ಹೊಸ ಬ್ಲಾಗ್ ಮಾಡಿಕೊಂಡಿದ್ದೆ ಹೀಗೆ ಮನಸ್ಸಿಗೆ ಬಂದಿದ್ದೊಷ್ಟು ಬರೆದು ಬಿಡುವ ಎಂಬ ಹೆಬ್ಬಯಕೆಯಿಂದ. ಉಜಿರೆ ಕಾಲೇಜಿನಲ್ಲಿ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದೆ. ಅದು ನನಗೆ ಹೆಮ್ಮಯ ಸಂಗತಿ.

ನಾನು ಬರೆದುಕೊಳ್ಳಲೇ ಬೇಕಾಗಿರುವುದು ನನ್ನ ನೆಚ್ಚಿನ ಅಧ್ಯಾಪಕರ ಕುರಿತಾಗಿಯೇ.ಅಜಯ್ ಸರ್ ಕಾಲೇಜಿನಲ್ಲಿ ಪ್ರತಿ ವಿದ್ಯಾರ್ಥಿಯು ಅವರ ಬಗ್ಗೆ ಮಾತಾಡಿಯೇ ಮಾತಾಡುತ್ತಾನೆ. ಅದು ಪಾಸಿಟಿವ್ ಅಥವಾ ನೆಗೆಟಿವ್ ಆದರೆ ಮಾತಡುವುದಂತು ನೂರಕ್ಕೆ ನೂರರಷ್ಟು ಸತ್ಯ. ನನ್ನ ಪಾಲಿಗಂತು ಶಿಸ್ತಿನ ಸಿಪಾಯಿ. ಅವರ ಬಗ್ಗೆ ಎಲ್ಲಿಲ್ಲದ ಅಭಿಮಾನ. ಆದರೆ ಅದನ್ನು ವ್ಯಕ್ತಪಡಿಸುವ ಅವಕಾಶವೇ ನನ್ನ ಪಾಲಿಗೆ ಸಿಗಲಿಲ್ಲ. ಅವರಿಗೆ ಅದು ಬೇಕಾಗಿಯು ಇರಲಿಲ್ಲ.ನನ್ನ ತರಗತಿಗೆ ಬರದಿದ್ದರು ಪರವಾಗಿಲ್ಲ ನಾನು ನಿಮ್ಮಿಂದ ಸಾಕಷ್ಟು ಕಲಿತೆದ್ದೇನೆ ಸಾರ್.

ಇನ್ನು ನನ್ನ ನೆಚ್ಚಿನ ಗುರುಗಳು ಡಾ.ಬಿ.ಪಿ. ಸಂಪತ್ ಕುಮಾರ್. ಕಾಲೇಜಿಗೆ ಹೋಗಿದ್ದು ಪತ್ರಿಕೋದ್ಯಮಕ್ಕಾದರೂ ನನ್ನನ್ನೂ ಕನ್ನಡದ ಕಡೇ ಸೆಳೆಯುವಲ್ಲಿ ಸಂಪತ್ ಸರ್ ಗೆದ್ದುಬಿಟ್ಟಿದ್ದರು.

ಸಂಪತ್ ಸರ್ ಜೊತೆ ಮಾಡಿದ ಕೆಲಸದ ಅನುಭವದಲ್ಲಿ ಅವರ ತಾಳ್ಮೆ ನನ್ನನ್ನು ಬಹಳವಾಗಿ ಕಾಡಿದೆ. ನಾನು ಶುದ್ಧ ಸೋಮಾರಿ ಆದರೆ ಯಾವತ್ತಿಗೂ ನಾನು ಅವರಿಂದ ಒಳ್ಳೆಯ ಅಭಿಪ್ರಾಯಗಳನ್ನೆ ನಿರೀಕ್ಷಿಸಿ ವಿಭಾಗಕ್ಕೆ ಹೋಗುತ್ತಿದ್ದೆ. ಅವರೆಂದು ನಿರಾಸೆ ಮಾಡಲಿಲ್ಲ. ಕುಪ್ಪಳ್ಳಿಯ ಪ್ರವಾಸ ಜೀವನವಿಡಿ ನೆನಪಿರುತ್ತದೆ. ಅಂಥಹ ಒಂದು ಪ್ರವಾಸವನ್ನು ಮೊದಲ ಬಾರಿಗೆ ನಾನು ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದಾಗ ಮಾಡುವ ಬಯಕೆಯನ್ನು ಅವರು ಈಡೇರಿಸಿದ್ದು ನನಗೆ ಹೆಮ್ಮೆ. ನನ್ನೆಲ್ಲಾ ಸ್ನೇಹಿತರು ಇಂದಿಗೂ ಅದೇ ಪ್ರವಾಸವನ್ನು ಮೆಲುಕು ಹಾಕುತ್ತಾರೆ. ಒಟ್ಟಾಗಿ ಹೋಗಿದ್ದಕ್ಕಿಂತ ಕುಪ್ಪಳ್ಳಿ ಹಾಗೂ ಪುಟ್ಟಪ್ಪ ನನ್ನನ್ನು ಇಂದಿಗೂ ಕಾಡುತ್ತಾರೆ. ಕನ್ನಡ ವಿಭಾಗ ಕನ್ನಡ ಸಂಘದ ಜೊತೆ ಒಳ್ಳೆಯ ಒಡನಾಟವಿಟ್ಟು ಅದರ ಅಡಿಯಲ್ಲಿ ನಮ್ಮೆಲ್ಲರಿಗೂ ಬದುಕು ಕಟ್ಟಿಕೊಟ್ಟದೆ ನಾನದಕ್ಕೆ ಋಣಿ.

ಈ ಸಮಾಜದಲ್ಲಿ ನಾನು ಗುರುತಿಸಿಕೊಳ್ಳಬೇಕು. ಸಮಾಜದಲ್ಲಿ ಒಳ್ಲೆಯ ವ್ಯಕ್ತಿ ಅನ್ನಿಸಿಕೊಳ್ಳಬೇಕು ಎಂಬ ಯಾವ ಬಯಕೆಯು ನನ್ನಲ್ಲಿರಲಿಲ್ಲ. ಒಳ್ಳೆಯವನಾಗಿ ಎನಾಗಬೇಕಿದೆ. ಏನಾದರೂ ಈ ಸಮಾಜ ಹೀಗೆ ಇರುತ್ತೆ ನಾನೊಬ್ಬ ಬದಲಾಗಿ ಸಮಾಜ ಬದಲಾಗುತ್ತಾ ಎನ್ನುವ ಮಾನಸಿಕತೆ ನನ್ನಲ್ಲಿ ದಟ್ಟವಾಗಿತ್ತು. ಆದರೆ ಅದೆಲ್ಲವನ್ನು ನನ್ನಿಂದ ತೊಡೆದು ಹಾಕಿದ್ದು ನನ್ನ ಪ್ರೀತಿಯ ಅದ್ಯಾಪಕರಾದ ಡಾ.ಎ. ಜಯಕುಮಾರ್ ಶೆಟ್ಟಿ ಸರ್. ಜಯಕುಮಾರ್ ಸರ್ ನೆನಪಾದ ಕ್ಷಣ ನನಗೆ ಅಪ್ರತಿಕಾರವೇ ಶ್ರೇಷ್ಠ ಆದರ್ಶ ಎನ್ನುವ ವಿವೇಕಾನಂದರ ಮಾತು ನೆನಪಾಗುತ್ತದೆ. ಈ ಮಾತನ್ನು ತರಗತಿಯಲ್ಲಿ ಹೇಳಿ ಹೇಳಿ ಇಂದು ನಾನು ಯಾವುದೇ ಪ್ರತಿಕಾರಕ್ಕೆ ತಕ್ಷಣವೇ ಮುಂದಾಗದೇ ಇರುವುದನ್ನು ಕಲಿಸಿಕೊಟ್ಟಿದ್ದಾರೆ.

ಪ್ರತಿ ದಿನ ಕ್ಲಾಸ್ ನಲ್ಲಿ ನನ್ನನ್ನು ಹುಡುಕಿ ಬಂದಿದ್ದೆನೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವಾಗ ನಾನು ತುಂಬ ಖುಷಿ ಪಟ್ಟಿದ್ದೇನೆ. ಎನೇ ಹೇಳಿದರೂ ಒಂದು ಕ್ಷಣ ಸುಮ್ಮನಿರಬೇಕು ಅನ್ನಿಸುವುದು ಜಯ್ ಕುಮಾರ್ ಸರ್ ನೆನಪಾದಾಗ. ಉತ್ಸಾಹ ಎಂಬುದು ನನ್ನಲ್ಲಿ ಒಮ್ಮಲೇ ಬರುತ್ತದೆ. ಅಷ್ಟೇ ಬೇಗವಾಗಿ ಖಾಲಿಯಾಗುತ್ತದೆ. ಆದರೆ ಜಯಕುಮಾರ್ ಸರ್ ನೋಡಿದಾಗ ನನಗೆ ನಾನೇ ಉತ್ಸಾಹ ತುಂಬಿಕೊಳ್ಳಬೇಕೆನಿಸುತ್ತದೆ. ಇದ್ಯಾವುದು ಹೊಗಳಿಕೆಯಲ್ಲ. ಮನಸ್ಸಿಗೆ ಅನ್ನಿಸಿದ್ದು ಬರೆದುಕೊಳ್ಳಬೇಕು ಅನ್ನಿಸಿದ್ದು. ಇನ್ನೂ ಬೇಕಾದಷ್ಠಿದೆ ಬರೆಯಲು ಮುಂದೆ ಅವಕಾಶ ಸಿಕ್ಕಾಗ ಬರೆದುಕೊಳ್ಳುತ್ತೇನೆ. ನಾಳೆ ಶಿಕ್ಷಕರ ದಿನಾಚರಣೆ. ಈ ನೆಪದಲ್ಲಿ ನನ್ನ ಗುರುಗಳನ್ನು ಸ್ಮರಿಸಿಕೊಂಡಿದ್ದೇನೆ.